Bangalore, ಮೇ 1 -- ಮೇ 1 ರಂದು ಮಂಡ್ಯ ಜಿಲ್ಲೆ ಮೇಲುಕೋಟೆಯ ರಾಮಾನುಜಾಚಾರ್ಯರ ರಥೋತ್ಸವ. ಮೇಲುಕೋಟೆ ಕ್ಷೇತ್ರಾಧಿಪತಿ ಚಲುವನಾರಾಯಣಸ್ವಾಮಿ ಗುರುಗಳಾದ ರಾಮಾನುಜಾಚಾರ್ಯರ ತಿರುನಾಳ್‌ ಭಾಗವಾಗಿ ರಥೋತ್ಸವವೂ ನಡೆಯಲಿದೆ.

ಮೇ 2 ರಂದು ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕು ಉಜ್ಜಿನಿ ಮರುಳಸಿದ್ದೇಶ್ವರ ಜಾತ್ರೆ. ಉಜ್ಜಿನಿಯು ಉತ್ತರ ಕರ್ನಾಟಕ ಭಾಗದ ಪ್ರಮುಖ ಊರು. ಮರುಳಸಿದ್ದೇಶ್ವರ ದೇಗುಲ ಹೆಸರುವಾಸಿಯೂ ಹೌದು.

ಮೇ3 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೋಟೆ ಪ್ರಸನ್ನ ರಾಮ ರಥೋತ್ಸವ. ಪುರಾತನ ದೇಗುಲವಾದ ಇಲ್ಲಿಯೂ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.

ಮೇ 6 ರಂದು ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ರಥೋತ್ಸವ ಜರುಗಲಿದೆ. ರೋಣದ ಪುರಾತನ ದೇಗುಲವಾದ ವೀರಭದ್ರೇಶ್ವರನ ಭಕ್ತರು ನಾನಾ ಭಾಗದಲ್ಲಿದ್ದಾರೆ.

ಮೇ 7 ರಂದು ಗದಗ ಜಿಲ್ಲೆ ಲಕ್ಷ್ಮೇಶ್ವರದ ಸೋಮೇಶ್ವರ ಜಾತ್ರಾ ಮಹೋತ್ಸವ. ಪ್ರತಿ ವರ್ಷ ಒಂದು ವಾರ ಕಾಲ ನಡೆಯುವ ಲಕ್ಷೇಶ್ವರದ ಹಳೆಯ ಹಾಗು ಹೊಯ್ಸಳ ಕಾಲದ ಸೋಮೇಶ್ವರ ಸ್ವಾಮಿ ರಥೋತ್ಸವವೂ ನಡೆಯಲಿದೆ.

ಮೇ 8 ರಂ...