Bengaluru, ಏಪ್ರಿಲ್ 25 -- ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಕನ್ನಡದ ಹಲವು ಸಿನಿಮಾಗಳು, ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಅಜ್ಞಾತವಾಸಿ: ಏಪ್ರಿಲ್‌ 11ರಂದು ತೆರೆಗೆ ಬಂದ ಸಿನಿಮಾ ಅಜ್ಞಾತವಾಸಿ. ಗುಲ್ಟು ಸಿನಿಮಾ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೇಮಂತ್ ಎಂ ರಾವ್ ಈ ಸಿನಿಮಾ ನಿರ್ಮಿಸಿದ, ಮಲೆನಾಡಿನಲ್ಲಿ ನಡೆದ ಕೊಲೆಯ ಸುತ್ತ ಸುತ್ತುತ್ತದೆ. ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೀ 5 ಒಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಮನದ ಕಡಲು: ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು ಸಿನಿಮಾ ಕಳೆದ ತಿಂಗಳ ಮಾರ್ಚ್‌ 25ರಂದು ತೆರೆಗೆ ಬಂದಿತ್ತು. ಯುವ ಕಲಾವಿದರಾದ ಸುಮುಖ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಸೇರಿದಂತೆ ಇತರರು ನಟಿಸಿದ್ದಾರೆ. ಇದೀಗ ಇದೇ ಸಿನಿಮಾ ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ.

ಅಧಿಪತ್ರ: ಬಿಗ್...