Melkote, ಏಪ್ರಿಲ್ 26 -- ಮೇಲುಕೋಟೆ: ಇತಿಹಾಸ ಪ್ರಸಿದ್ದ ಧಾರ್ಮಿಕ ಸ್ಥಳ, ಮಂಡ್ಯ ಜಿಲ್ಲೆಯ ಮೇಲುಕೋಟೆಯ ಕಲ್ಯಾಣಿ ತೀರದಲ್ಲಿರುವ ಲಕ್ಷ್ಮಿ ಸಮೇತ ವರಾಹಸ್ವಾಮಿ ದೇವಾಲಯದಲ್ಲಿ ವೈಭವದ ವರಾಹ ಜಯಂತಿ ನೆರವೇರಿತು. ಕಲ್ಯಾಣಿ ಸಮುಚ್ಚಯದಲ್ಲಿರುವ ವರಾಹಸ್ವಾಮಿಗೆ ಬೆಳಿಗ್ಗೆ ವೇದ ಮಂತ್ರಪಠಣ ದೊಂದಿಗೆ ವೈಭವದಿಂದ ಅಭಿಷೇಕ ನೆರವೇರಿಸಲಾಯಿತು.ಮೂರನೇ ಸ್ಥಾನಿಕರಾದ ಸಂಪತ್ ಕುಮಾರನ್ ಮತ್ತು ಸಹೋದರರು.ವರಾಹ ಜಯಂತಿಯ ಸೇವೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.ಸಂಜೆ ಚೆಲುವನಾರಾಯಣ ಸ್ವಾಮಿಯ ಉತ್ಸವ ವರಾಹ ಸನಿಧಿಗೆ ನೆರವೇರಿತು.ಈ ವೇಳೆ ಕಾಡುವರಾಹ ಸೇವಿಸುವ ಕೊನ್ನಾರಿ ಗೆಡ್ಡೆಯಲ್ಲಿ ಮಾಡಿದ ಪ್ರಸಾದವನ್ನು ನೈವೇದ್ಯ ಮಾಡಿಭಕ್ತರಿಗೆ ವಿತರಿಸಲಾಯಿತು.

ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಶುಕ್ರವಾರ ರಾತ್ರಿ ಕೊಡೆ ತಿರುನಾಳ್ ನಿಮಿತ್ತ ಪ್ರಸಿದ್ಧ ದಿವ್ಯ ಕ್ಷೇತ್ರ ಶ್ರೀರಂಗಂ ರಂಗನಾಥನ ಮಾದರಿಯಲ್ಲಿ ಕಿಳಿಮಾಲೆ ಧರಿಸಿ ಉತ್ಸವ ನೆರವೇರಿಸಲಾಯಿತು.

ಚೆಲುವನಾರಾಯಣ ಸ್ವಾಮಿ ವೈಮಾಳಿಗೆ ಕೋಡೆ ತಿರುನಾಳ್ ಉತ್ಸವ ಇಂದು ಭಾನುವಾರ ನಡೆಯಲಿದೆ,ಕಳ...