Melkote, ಮೇ 3 -- ಮೇಲುಕೋಟೆ : ಚಿತ್ತಿರೈ ವೈಶಾಖಮಾಸದ ಆರಿದ್ರಾನಕ್ಷತ್ರದ ಶುಭದಿನವಾದ ಶುಕ್ರವಾರ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವ ಅತ್ಯಂತ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಮಂಡ್ಯ ಜಿಲ್ಲೆಯ ಬೆಟ್ಟದ ಐತಿಹಾಸಿಕ ತಾಣ ಮೇಲುಕೋಟೆಯಲ್ಲಿ ನೆರವೇರಿತು. ಆಚಾರ್ಯರಿಗೆ ನಡೆದ ಮಂಟಪವಾಹನೋತ್ಸವ ಹಾಗೂ ದ್ವಾದಶಾರಾಧನೆಯ ಮಹಾಭಿಷೇಕದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು ತಿರುನಕ್ಷತ್ರದ ದಿನ ಬೆಳಿಗ್ಗೆ 9 ಗಂಟೆಗೆ ರಾಮಾನುಜಾಚಾರ್ಯರಿಗೆ ಪುಷ್ಪಮಂಟಪವಾಹನೋತ್ಸವ ಈಯಲ್ ಶಾತ್ತುಮೊರೆ ನಡೆದವು. ನಂತರ ಪವಿತ್ರ ಕಲ್ಯಾಣಿಯಿಂದ ಮೆರವಣಿಗೆಯಲ್ಲಿ ಪವಿತ್ರ ತೀರ್ಥತಂದು 11-30 ಗಂಟೆಯಿಂದ ಆಚಾರ್ಯರಿಗೆ ದ್ವಾದಶಾರಾಧನೆಯೊಂದಿಗೆ ಹಾಲು, ಮೊಸರು, ಜೇನು, ಅರಿಷಿಣ, ಶ್ರೀಗಂಧ ಮುಂತಾದ ಮಂಗಳ ದ್ರವ್ಯಗಳಿಂದ ವೇದಘೋಷ ಮಂಗಳವಾದ್ಯದೊಂದಿಗೆ ಮಹಾಭಿಷೇಕ ನೆರವೇರಿಸಲಾಯಿತು. ಸಂಜೆ ಚೆಲುವನಾರಾಯಣಸ್ವಾಮಿ ಪಾದುಕಾ ಮರ್ಯಾದೆಯೊಂದಿಗೆ ಮಹಾಮಂಗಳಾರತಿಯೊಂದಿಗೆ ಪ್ರಥಮಹಂತದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು...
Click here to read full article from source
To read the full article or to get the complete feed from this publication, please
Contact Us.