ಭಾರತ, ಮೇ 12 -- ಕಿರುತೆರಯ ಹಾಸ್ಯ ಕಲಾವಿದ ಅತ್ಯಂತ ಪ್ರತಿಭಾವಂತ ರಾಕೇಶ್ ಪೂಜಾರಿ ನಿನ್ನೆ ರಾತ್ರಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೀಗೆ ಯುವಕರು ಹೃದಯಾಘಾತದಿಂದ ಸಾಯುವುದು, ಕುಸಿದು ಬಿದ್ದು ಸಾಯುವುದು ಅತ್ಯಂತ ಸಾಮಾನ್ಯವಾಗುತ್ತಿದೆ. ಈ ಸರಣಿ ಸಾವುಗಳಿಗೆ ಈಗ ಹೊಸ ಸೇರ್ಪಡೆ ರಾಕೇಶ್ ಪೂಜಾರಿ ಅವರ ಸಾವು. ಗೆಳೆಯ ರಾಜಾರಂ ತಲ್ಲೂರು ಇಂತಹ ಸಾವುಗಳ ಬಗ್ಗೆ ನಿತ್ಯವೂ ಎಂಬಂತೆ ಬರೆಯುತ್ತಿದ್ದಾರೆ, ಎಚ್ಚರಿಸುತ್ತಿದ್ದಾರೆ. ಸರ್ಕಾರಕ್ಕೂ ಈ ಸಾವುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪತ್ರವನೂ ಬರೆದಿದ್ದಾರೆ. ಫೇಸ್‌ಬುಕ್ ಗೆಳೆಯ, ಪತ್ರಕರ್ತ ಆಶಿಕ್ ಮುಲ್ಕಿ ದುಬೈಯಲ್ಲಿ ತಮ್ಮ ಗೆಳೆಯ 25 ವರ್ಷದ ಯುವಕ ಸಫ್ವಾನ್ ಸಾವಿನ ಬಗ್ಗೆ ನಿನ್ನೆಯಷ್ಟೇ ಬರೆದಿದ್ದಾರೆ. ಗೆಳೆಯ ಓಮ್ ಗಣೇಶ ಉಪ್ಪುಂಡ ಕೂಡ ತಮ್ಮ ಪರಿಚಯದ 32 ವರ್ಷ ಪ್ರಾಯದ ಯುವಕ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನಿತಿನ್ ಮಹಾಲೆ ಲೋ ಬಿಪಿಯ ಕಾರಣ ಮೃತಪಟ್ಟ ಬಗ್ಗೆ ನೋವಿನಿಂದ ಬರೆದಿದ್ದಾರೆ.

ಈ ಸಾವುಗಳಿಗೆ ಜೀವನಶೈಲಿ, ಆಹಾರಶೈಲಿ ಅಥವಾ ಜೀವನಶೈ...