Bengaluru, ಮೇ 6 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 18ನೇ ಎಪಿಸೋಡ್‌ ಕಥೆ ಹೀಗಿದೆ. ಮಗನಿಗೆ ಸರ್ಪ್ರೈಸ್‌ ಕೊಡಲು ಶಿವರಾಮೇಗೌಡ ಅವನನ್ನು ವಿದ್ಯಾ ಮನೆಗೆ ಹೆಣ್ಣು ನೋಡಲು ಕರೆದೊಯ್ಯುತ್ತಾನೆ. ಪ್ರೀತಿಸಿದ ಹುಡುಗಿಯೇ ಹೆಂಡತಿಯಾಗಿ ಬರುತ್ತಿದ್ದಾಳೆ ಎಂದು ಭದ್ರ ಖುಷಿಯಾಗುತ್ತಾನೆ. ವಿದ್ಯಾ ಮಾತ್ರ ನನಗೆ ಈ ಮದುವೆ ಬೇಡವೆಂದು ಹಟ ಹಿಡಿಯುತ್ತಾಳೆ. ಆದರೆ ವಿದ್ಯಾ ಮಾತಿಗೆ ಬೆಲೆ ಕೊಡದ ಚೆಲುವ, ಬೀಗರ ಜೊತೆ ತಾಂಬೂಲ ಬದಲಿಸಿಕೊಳ್ಳುತ್ತಾನೆ. ಇನ್ಮುಂದೆ ವಿದ್ಯಾ ಓದುವುದು ಬೇಡ ಎಂದು ಶಿವರಾಮೇಗೌಡ ಕಂಡಿಷನ್‌ ಮಾಡುತ್ತಾನೆ. ಅದನ್ನು ಕೇಳಿ ವಿದ್ಯಾಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗುತ್ತದೆ.

ಮತ್ತೊಂದೆಡೆ ಸಾವಿತ್ರಿ ತನ್ನ ಅಣ್ಣ ಹೆಣ್ಣು ನೋಡಲು ಹೋಗಿರುವುದು ಎಲ್ಲಿಗೆ ಎಂದು ತಿಳಿಯದೆ ಒದ್ದಾಡುತ್ತಾಳೆ. ಮನೆ ಕೆಲಸದವನ ಬಳಿ ವಿಷಯ ಕೇಳುತ್ತಾಳೆ. ನಿಮ್ಮ ಮನೆಗೆ ಊಟ ತಂದುಕೊಂಡುತ್ತಿದ್ದ ರತ್ನಕ್ಕನ ಮಗಳನ್ನೇ ಹೆಣ್ಣು ನೋಡಲು ಹೋಗಿರುವುದು ಎಂ...