ಭಾರತ, ಮೇ 16 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 28ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾ ಮದುವೆ ನಿಂತಿದ್ದಕ್ಕೆ ಖುಷಿಯಿಂದ ಒಡವೆಗಳನ್ನು ತೆಗೆದಿಡುತ್ತಾಳೆ. ನಾನೇ ಪೊಲೀಸರಿಗೆ ಪೋನ್‌ ಮಾಡಿದ್ದು ಎಂದು ತಂಗಿ ಬಳಿ ಹೇಳುತ್ತಾಳೆ. ಶಿವರಾಮೇಗೌಡ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ್ದು ಮಾಧ್ಯಮದಲ್ಲಿ ಪ್ರಸಾರವಾಗುತ್ತದೆ. ಆದ್ದರಿಂದ ಅವನಿಗೆ ಬೇಲ್‌ ದೊರೆಯದೆ ಪ್ರಕರಣ ಕೋರ್ಟ್‌ ಮೆಟ್ಟಿಲೇರುತ್ತದೆ.

ಪ್ರಭಾವಿ ರಾಜಕಾರಣಿ ಶಿವರಾಮೇಗೌಡನಿಗೆ ಶಿಕ್ಷೆ ಆಗಬೇಕೆಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಾದ ಮಾಡುತ್ತಾರೆ. ಹುಡುಗಿಯ ಮನೆಯವರಿಗಾಗಲೀ, ನನ್ನ ಕ್ಲೈಂಟ್‌ಗಾಗಲೀ ಕಾನೂನಿನ ತಿಳುವಳಿಕೆ ಇಲ್ಲದಿರುವುದರಿಂದ ಈ ತಪ್ಪು ನಡೆದಿದೆ. ಆದರೆ ಪೊಲೀಸರು ಬಂದು ಹೇಳಿದ ಕೂಡಲೇ ನನ್ನ ಕ್ಲೈಂಟ್‌ ಶಿವರಾಮೇಗೌಡ ಸ್ವಇಚ್ಛೆಯಿಂದ ಮದುವೆ ನಿಲ್ಲಿಸಿದ್ದಾರೆ ಎಂದು ಆತನ ಪರ ವಕೀಲರು ವಾದ ಮಾಡುತ್ತಾರೆ. ಇರಬಹುದು, ಆದರೆ ಆತ ಡ್ಯೂಟಿಯಲ್ಲಿದ್ದ ಪೊಲೀಸರ ಕರ್ತವ...