ಭಾರತ, ಮೇ 29 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 40ನೇ ಎಪಿಸೋಡ್‌ ಕಥೆ ಹೀಗಿದೆ ವಿದ್ಯಾ ಮನೆಯಲ್ಲಿ ಮದುವೆ ಶಾಸ್ತ್ರ ನಡೆಯುವಾಗ ಅಲ್ಲಿಗೆ ವಿನಂತಿ ಬರುತ್ತಾಳೆ. ಭದ್ರ ಮಾವನನ್ನು ನಾನು ಚಿಕ್ಕಂದಿನಿಂದ ಪ್ರೀತಿಸುತ್ತಿದ್ದೇನೆ, ಅವನನ್ನೇ ನನ್ನ ಗಂಡ ಎಂದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮ ಮಗಳು ಭದ್ರ ಮಾವನನ್ನು ಮದುವೆಯಾಗಲು ನಾನು ಬಿಡುವುದಿಲ್ಲ ಎನ್ನುತ್ತಾಳೆ. ಅಷ್ಟರಲ್ಲಿ ಚೆಲುವ, ಅಳಿಯನಿಗೆ ಕರೆ ಮಾಡುತ್ತಾನೆ. ಈಗಲೇ ಎಲ್ಲರಿಗೂ ಕ್ಷಮೆ ಕೇಳಿ ಮನೆಗೆ ಬರುವಂತೆ ಭದ್ರ ತಾಕೀತು ಮಾಡುತ್ತಾನೆ. ವಿನಂತಿ ಎಲ್ಲರ ಕ್ಷಮೆ ಕೇಳಿ ಅಲ್ಲಿಂದ ಹೊರಡುತ್ತಾಳೆ.

ಮದುವೆ ದಿನ ಶಿವರಾಮೇಗೌಡನ ಕುಟುಂಬದವರು ಛತ್ರಕ್ಕೆ ಬರುತ್ತಾರೆ. ಶಿವರಾಮೇಗೌಡ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸುತ್ತಾನೆ. ಅಷ್ಟರಲ್ಲಿ ಲೋಕೇಶ ಕೂಡಾ ಮದುವೆ ಮನೆಗೆ ಬರುತ್ತಾನೆ. ಕ್ವಾಟ್ಲೆ ಅವನನ್ನು ಕರೆದು, ನಿನ್ನ ಬಳಿ ಪೋನ್‌ ಕೇಳಿದ ಹುಡುಗಿ ಸಿಕ್ಕಳಾ ಎಂದು ಕೇಳುತ...