ಭಾರತ, ಮೇ 28 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 39ನೇ ಎಪಿಸೋಡ್‌ ಕಥೆ ಹೀಗಿದೆ. ತನ್ನ ಬಳಿ ಮೊಬೈಲ್‌ ತೆಗೆದುಕೊಂಡು ಪೊಲೀಸರಿಗೆ ಫೋನ್‌ ಮಾಡಿದ್ದು ವಿನಂತಿ ಎಂದು ನೆನಪಿದ್ದರೂ ಲೋಕೇಶ ಮಾತ್ರ ದುಡ್ಡಿನ ಆಸೆಗೆ ಈ ಹುಡುಗಿ ಅಲ್ಲ ಎನ್ನುತ್ತಾನೆ. ನಂತರ ವಿನಂತಿಗೆ ಕರೆ ಮಾಡಿ ದುಡ್ಡಿಗಾಗಿ ಬೇಡಿಕೆ ಇಡುತ್ತಾನೆ. ಮತ್ತೊಂದೆಡೆ, ಚೆಲುವ ತಾನು ಕೂಡಿಟ್ಟ ಹಣದಲ್ಲಿ ವಿದ್ಯಾಗೆ ಚಿನ್ನದ ಉಂಗುರ ತಂದುಕೊಡುತ್ತಾನೆ. ಅಪ್ಪನ ಪ್ರೀತಿ ಕಂಡು ವಿದ್ಯಾ ಭಾವುಕಳಾಗುತ್ತಾಳೆ.

ಮದುವೆ ಹಿಂದಿನ ದಿನ ಶಿವರಾಮೇಗೌಡ, ಮನೆಯಲ್ಲಿ ಪೂಜೆ ಮಾಡಿ ಎಲ್ಲರಿಗೂ ಆರತಿ ಕೊಡುತ್ತಾನೆ. ತನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಮಗನ ಕೊರಳಿಗೆ ಹಾಕುತ್ತಾನೆ. ಇದೆಲ್ಲಾ ಈಗ ಏಕೆ ಅಪ್ಪಯ್ಯ ಎಂದು ಭದ್ರ ಕೇಳುತ್ತಾನೆ. ನನ್ನ ನಂತರ ಈ ಮನೆಗೆ ನೀನೆ ಉತ್ತರಾಧಿಕಾರಿ, ನಾನು ಮಾಡುತ್ತಿರುವುದು ನಿನ್ನ ಖುಷಿಗಾಗಿ, ನೀನು ನನ್ನ ಹೆಸರು ಉಳಿಸಿಕೊಂಡು ಹೋಗುತ್ತಿದ್ದೀಯ, ನನ್ನ ಎಲ್ಲಾ ...