Bengaluru, ಮೇ 7 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 19ನೇ ಎಪಿಸೋಡ್‌ ಕಥೆ ಹೀಗಿದೆ. ಶಿವರಾಮೇಗೌಡ ಹಾಗೂ ಕುಟುಂಬ ಚೆಲುವನ ಮನೆಗೆ ಹೋಗಿ ಹೆಣ್ಣು ನೋಡಿ ತಾಂಬೂಲ ಬದಲಿಸಿಕೊಂಡು ಬರುತ್ತಾರೆ. ಮಗಳು ದೊಡ್ಡ ಮನೆಗೆ ಸೊಸೆಯಾಗಿ ಹೋಗುತ್ತಿದ್ದಾಳೆ ಎಂದು ಚೆಲುವ ಖುಷಿ ಪಟ್ಟರೂ ವಿದ್ಯಾಗೆ ಮಾತ್ರ ಮದುವೆ ಆಗಲು ಇಷ್ಟವಿರುವುದಿಲ್ಲ. ಹೇಗಾದರೂ ಮಾಡಿ ಅಪ್ಪನನ್ನು ಒಪ್ಪಿಸೋಣ ಎಂದು ತನ್ನ ಮನಸ್ಸಿನ ಆಸೆಯನ್ನು ಅವನ ಬಳಿ ಹೇಳಿಕೊಳ್ಳುತ್ತಾನೆ. ಆದರೆ ಚೆಲುವ, ತನ್ನ ಹೆಂಡತಿ ರತ್ನಳನ್ನು ದಾಳವನ್ನಾಗಿಸಿಕೊಂಡು ಮಗಳನ್ನು ಮದುವೆಗೆ ಒಪ್ಪಿಸುತ್ತಾನೆ.

ನನ್ನ ಮೇಲೆ ಕರುಣೆ ತೋರಿಸು ಎಂದು ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಿದ್ದೆ, ಆದರೆ ಆ ದೇವರು ಈಗ ಕರುಣೆ ತೋರಿಸಿದ್ಧಾನೆ, ನಮಗೆ ಅದೃಷ್ಟ ಒಲಿದು ಬಂದಿದೆ. ಅದನ್ನು ಸಹಿಸಲಾಗದೆ ಹಲವರು ಈ ಮದುವೆ ನಿಂತರೆ ಸಾಕು ಎಂದು ಕಾಯುತ್ತಿದ್ಧಾರೆ. ಅಂತವರು ನನ್ನನ್ನು ವ್ಯಂಗ್ಯ ಮಾಡಿಕೊಂಡು ನಗುವಂತೆ ಮಾಡಬೇಕೆಂ...