Bengaluru, ಮೇ 8 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 20ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾಗೆ ಮದುವೆ ಗೊತ್ತಾದ ನಂತರ ಚೆಲುವರಾಜ ಅವಳ ಕಾಲೇಜು ಸಮವಸ್ತ್ರವನ್ನು ಸುಡುತ್ತಾನೆ. ಅದು ಗೊತ್ತಾಗಿ ವಿದ್ಯಾ ಕಣ್ಣೀರಿಡುತ್ತಾಳೆ. ಅಪ್ಪ, ನೀನು ಸುಟ್ಟಿದ್ದು ಬಟ್ಟೆಯನ್ನಲ್ಲ, ನನ್ನ ಆಸೆ ಹಾಗೂ ಕನಸುಗಳನ್ನು ಎಂದು ನೋವು ಅನುಭವಿಸುತ್ತಾಳೆ. ಮತ್ತೊಂದೆಡೆ ಭದ್ರನ ರೂಮ್‌ಗೆ ಹೋಗುವ ವಿನಂತಿ ಅವನನ್ನು ಅಪ್ಪಿಕೊಂಡು ನನ್ನನ್ನು ಮದುವೆಯಾಗು ಎಂದು ಬೇಡಿಕೊಳ್ಳುತ್ತಾಳೆ. ಆದರೆ ಅವಳ ವರ್ತನೆಯಿಂದ ಭದ್ರ ಕೋಪಗೊಂಡು ಬೈದು ಕಳಿಸುತ್ತಾನೆ.

ಅಪ್ಪ, ತನ್ನ ಯೂನಿಫಾರ್ಮ್‌ ಸುಟ್ಟಿದ್ದನ್ನು ನೆನಪಿಸಿಕೊಂಡು ವಿದ್ಯಾ ಅಳುತ್ತಾ ಕೂರುತ್ತಾಳೆ. ತನ್ನ ಬ್ಯಾಗಿನಲ್ಲಿದ್ದ ಪುಸ್ತಕಗಳನ್ನು ಎದೆಗೆ ಅವುಚಿಕೊಳ್ಳುತ್ತಾಳೆ. ಕಾಲೇಜಿನಲ್ಲಿ ಕಳೆದ ಹಳೆದ ದಿನಗಳನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಾಳೆ. ಒಂದೆಡೆ ವಿದ್ಯಾಗೆ ಮದುವೆ ಇಷ್ಟ ಇಲ್ಲದೆ ಅಳುತ್ತಿದ್ದರೆ, ಮತ್ತೊಂದ...