ಭಾರತ, ಮೇ 20 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 32ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರ ಹಾಗೂ ಅವನ ಕುಟುಂಬ ದೇವಲಾಪುರದಿಂದ ಹುಲಿಕೇರಿಗೆ ವಾಪಸ್‌ ಹೋಗುತ್ತಾರೆ. ಇತ್ತ ವಿದ್ಯಾ ಓದುವ ಆಸೆಯಿಂದ ಮನೆ ಬಿಟ್ಟು ಹೋಗಲು ನಿರ್ಧರಿಸುತ್ತಾಳೆ. ತಂಗಿ ಸರಸ್ವತಿ ಅಕ್ಕನಿಗೆ ಸಹಾಯ ಮಾಡುತ್ತಾಳೆ. ಆದರೆ ದಾರಿ ಮಧ್ಯೆ ಚೆಲುವ ಕುಡಿದು ಬಿದ್ದಿದ್ದನ್ನು ನೋಡಲಾಗದೆ ವಿದ್ಯಾ ಅವನನ್ನು ಅಪಘಾತದಿಂದ ರಕ್ಷಿಸಿ ಮನೆಗೆ ವಾಪಸ್‌ ಕರೆತರುತ್ತಾಳೆ. ಚೆಲುವನ ಅವಾಂತರ ಕಂಡು ರತ್ನ ಹಾಗೂ ಕಾಳವ್ವ ಗಾಬರಿ ಆಗುತ್ತಾರೆ.

ವಿದ್ಯಾಳನ್ನು ನೋಡಿ ರತ್ನಳಿಗೆ ಆಶ್ಚರ್ಯವಾಗುತ್ತದೆ. ನೀನು ರೂಮ್‌ನಲ್ಲಿ ಬಂಧಿಯಾಗಿದ್ದೆ ತಾನೇ ಹೊರಗೆ ಹೇಗೆ ಬಂದೆ ಎಂದು ಆಶ್ಚರ್ಯದಿಂದ ಕೇಳುತ್ತಾಳೆ. ವಿದ್ಯಾಳನ್ನು ರತ್ನ ಪ್ರಶ್ನೆ ಮಾಡುವಾಗ ಸರಸ್ವತಿ ಕೂಡಾ ಗಾಬರಿಯಾಗುತ್ತಾಳೆ. ವಿದ್ಯಾಳ ಬ್ಯಾಗ್‌ ನೋಡಿ ಕಾಳವ್ವನಿಗೆ ಎಲ್ಲಾ ಅರ್ಥವಾಗುತ್ತದೆ. ನಿನ್ನ ಮಗಳು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡ...