ಭಾರತ, ಮೇ 3 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 15ನೇ ಎಪಿಸೋಡ್‌ ಕಥೆ ಹೀಗಿದೆ. ಸಾವಿತ್ರಿ ಅವಮಾನ ಮಾಡಿದ್ದಕ್ಕೆ ರತ್ನ ಬಳಿ ಕ್ಷಮೆ ಕೇಳಲು ವಿದ್ಯಾ ಮನೆಗೆ ಭದ್ರ ಬರುತ್ತಾನೆ. ನಿಮಗೆ ನಿಜವಾಗಲೂ ನಮಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೆ ಸಾಲ ತೀರಿಸಲು ಸಮಯಾವಕಾಶ ಕೊಡಿ ಎಂದು ರತ್ನ ಮನವಿ ಮಾಡುತ್ತಾಳೆ. ವಿನಂತಿಯನ್ನು ಭದ್ರನಿಗೆ ಕೊಟ್ಟು ಮದುವೆ ಮಾಡಿಕೊಡಲು ಸಾವಿತ್ರಿ ತನ್ನ ತಾಯಿಯನ್ನು ಅಣ್ಣ ಶಿವರಾಮೇಗೌಡನ ಬಳಿ ಸಂಧಾನಕ್ಕೆ ಕಳಿಸುತ್ತಾಳೆ.

ಯಾರಿಗೂ ಗೊತ್ತಿಲ್ಲದಂತೆ ತಮ್ಮ ಗೋವಿಂದೇಗೌಡನ ಜೊತೆ ತೋಟಕ್ಕೆ ಹೋಗುವ ಶಿವರಾಮೇಗೌಡ ಮಗ ಭದ್ರ ಪ್ರೀತಿ ಮಾಡುತ್ತಿರುವ ವಿದ್ಯಾ ತಂದೆಯನ್ನು ಅಲ್ಲಿಗೆ ಕರೆಸುತ್ತಾನೆ. ಭಯದಿಂದಲೇ ಗೌಡರ ಮುಂದೆ ಬಂದು ನಿಲ್ಲುವ ಚೆಲುವ, ಇವರು ನನಗೆ ಬೈಯ್ಯುವ ಮುನ್ನವೇ ನಾನೇ ಮನವಿ ಮಾಡಿಬಿಡುತ್ತೇನೆ ಎಂದು ದಯವಿಟ್ಟು ಸಾಲ ತೀರಿಸಲು ಸಮಯ ಕೊಡಿ ಎನ್ನುತ್ತಾನೆ, ನಾವು ಇಲ್ಲಿ ಕರೆಸಿರುವುದು ಸಾಲ ಕೇಳಲು ಅಲ್ಲ, ವಿಷಯ...