ಭಾರತ, ಮೇ 25 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 36ನೇ ಎಪಿಸೋಡ್‌ ಕಥೆ ಹೀಗಿದೆ. ಚೆಲುವ ಅದ್ದೂರಿಯಾಗಿ ವಿದ್ಯಾ ಹುಟ್ಟುಹಬ್ಬ ಆಚರಿಸಿ ಅವಳಿಗೆ ಕೇಕ್‌ ತಿನ್ನಿಸುತ್ತಾನೆ. ಅಷ್ಟರಲ್ಲಿ ಭದ್ರನಿಗೆ ಪರಿಚಯವಿರುವ ವ್ಯಕ್ತಿಯೊಬ್ಬರು ಅವನಿಗೆ ಕರೆ ಮಾಡಿ ಪೊಲೀಸರಿಗೆ ಫೋನ್‌ ಮಾಡಿದ್ದು ಯಾರು ಎಂಬ ವಿಚಾರ ಗೊತ್ತಾಗಿದೆ, ನೀವು ನನ್ನನ್ನು ಭೇಟಿಯಾದರೆ ಅವರ ವಿಳಾಸ ಕೊಡುವುದಾಗಿ ಹೇಳುತ್ತಾರೆ. ಈ ವಿಚಾರವನ್ನು ಭದ್ರ ಚೆಲುವನಿಗೆ ಹೇಳುತ್ತಾನೆ. ಮದುವೆ ನಿಲ್ಲಲು, ಶಿವರಾಮೇಗೌಡ ಜೈಲಿಗೆ ಹೋಗಲು ನನ್ನ ಮಗಳೇ ಕಾರಣ ಎಂದು ತಿಳಿದರೆ ನಮ್ಮ ಕಥೆ ಏನಾಗುವುದೋ ಎಂದು ಚೆಲುವ ಆತಂಕಗೊಳ್ಳುತ್ತಾನೆ.

ವಿದ್ಯಾ ಕೂಡಾ ಪರಿಸ್ಥಿತಿ ನೆನೆದು ಭಯಗೊಳ್ಳುತ್ತಾಳೆ. ಅವರು ಮನೆ ಬಳಿ ಬಂದು ಗಲಾಟೆ ಮಾಡುವುದಕ್ಕೆ ಮುನ್ನ ನಾನೇ ಒಪ್ಪಿಕೊಳ್ಳುತ್ತೇನೆ. ಅವರು ಏನೇ ಶಿಕ್ಷೆ ಕೊಟ್ಟರೂ ನಾನೇ ಅನುಭವಿಸುತ್ತೇನೆ ಎಂದು ಸರಸ್ವತಿಗೆ ಅಪ್ಪನ ಫೋನ್‌ ತರಲು ಹೇಳುತ್ತಾಳೆ. ವಿದ್ಯಾ ಆತ...