ಭಾರತ, ಮೇ 5 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 17ನೇ ಎಪಿಸೋಡ್‌ ಕಥೆ ಹೀಗಿದೆ. ಯಾರಿಗೂ ಹೇಳದೆ ಶಿವರಾಮೇಗೌಡ, ಮನೆಯವರನ್ನು ವಿದ್ಯಾ ಮನೆಗೆ ಹೆಣ್ಣು ನೋಡಲು ಕರೆತರುತ್ತಾನೆ. ತಾನು ಪ್ರೀತಿಸುತ್ತಿರುವ ವಿದ್ಯಾ ಮನೆಗೆ ನಾನು ಹೆಣ್ಣು ನೋಡಲು ಬಂದಿರುವುದು ಎಂದು ತಿಳಿದು ಭದ್ರ ಖುಷಿಯಾಗುತ್ತಾನೆ. ಶಿವರಾಮನ ತಾಯಿ, ಈಶ್ವರಿ ಮಾತ್ರ ಕೊಂಕು ಮಾತನಾಡುತ್ತಾರೆ. ಗೌಡರ ಮನೆಯವರು ಬಂದಿರುವುದು ಹೆಣ್ಣು ಕೇಳಲು ಎಂದು ತಿಳಿದು ವಿದ್ಯಾ ಕಣ್ಣೀರಿಡುತ್ತಾಳೆ.

ಹುಡುಗಿಯನ್ನು ಕರೆಸಿ ಎಂದು ಗೌಡರ ಮನೆಯವರು ಹೇಳುತ್ತಾರೆ. ವಿದ್ಯಾಳನ್ನು ಕರೆದುಕೊಂಡು ಬಾ ಎಂದು ಚೆಲುವ ತನ್ನ ಹೆಂಡತಿ ರತ್ನಳಿಗೆ ಹೇಳುತ್ತಾನೆ. ರತ್ನ ಮಗಳನ್ನು ಕರೆತರಲು ಒಳಗೆ ಹೋಗುತ್ತಾಳೆ. ಆದರೆ ವಿದ್ಯಾ ಮಾತ್ರ ನನಗೆ ಮದುವೆ ಬೇಡ, ನಾನು ಹೊರಗೆ ಬರುವುದಿಲ್ಲ ಎಂದು ಹಟ ಹಿಡಿದು ನಿಲ್ಲುತ್ತಾಳೆ. ಎಷ್ಟು ಹೊತ್ತಾದರೂ ವಿದ್ಯಾ ಬರದಿದ್ದಾಗ ಚೆಲುವ ಒಳಗೆ ಹೋಗುತ್ತಾನೆ. ಗೌಡರ ಮನೆಯವರು ಕರ...