ಭಾರತ, ಮೇ 15 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 27ನೇ ಎಪಿಸೋಡ್‌ ಕಥೆ ಹೀಗಿದೆ. ಇನ್ಸ್‌ಪೆಕ್ಟರ್‌ ಮೇಲೆ ಶಿವರಾಮೇಗೌಡ ಹಲ್ಲೆ ಮಾಡಿದ ವಿಡಿಯೋ ವೈರಲ್‌ ಆಗುತ್ತದೆ. ಮಾಧ್ಯಮಗಳಲ್ಲೂ ಪ್ರಸಾರವಾಗುತ್ತದೆ. ಅದನ್ನು ನೋಡಿ ಭದ್ರ ಕೋಪಗೊಳ್ಳುತ್ತಾನೆ. ಅಪ್ಪನಿಗೆ ಈ ಗತಿ ತಂದವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಅರಚುತ್ತಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮೇಗೌಡನಿಗೆ ಬೇಲ್‌ ಕೂಡಾ ದೊರೆಯುವುದಿಲ್ಲ. ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

ಮದುವೆ ಮನೆಯಿಂದ ಖುಷಿಯಾಗಿ ಮನೆಗೆ ಬಂದ ವಿದ್ಯಾ ಸೀರೆ, ಒಡವೆಯನ್ನು ತೆಗೆಯುತ್ತಾಳೆ. ನಾನು ಓದಿ ಡಾಕ್ಟರ್‌ ಆಗಿ ನಮ್ಮ‌ ಮನೆಯ ಕಷ್ಟವನ್ನು ದೂರ ಮಾಡಬೇಕು ಎಂದು ಬಹಳ ಕನಸು ಕಂಡಿದ್ದೆ, ಒಂದು ವೇಳೆ ಈ ಮದುವೆ ನಡೆದಿದ್ದರೆ ನನ್ನ ಕನಸು ಕನಸಾಗೇ ಉಳಿದುಬಿಡುತ್ತಿತ್ತು ಎಂದು ವಿದ್ಯಾ ತನ್ನ ತಂಗಿ ಸರಸ್ವತಿ ಬಳಿ ಆತಂಕ ವ್ಯಕ್ತಪಡಿಸುತ್ತಾಳೆ. ಮದುವೆ ನಡೆಯಲಿಲ್ಲವಲ್ಲ, ಸಮಾಧಾನ ಮಾಡಿಕ...