ಭಾರತ, ಫೆಬ್ರವರಿ 15 -- ಮುತ್ತೇ ಪ್ರಥಮ ಅದುವೇ ಜಗದ ನಿಯಮ ಎಂದು ರವಿಚಂದ್ರನ್ ಹಾಡಿರುವುದನ್ನು ನೀವು ಕೇಳಿರುತ್ತೀರಿ. ಪ್ರೀತಿ ಆರಂಭವಾದಾಗ ಮುತ್ತಿನ ಮೂಲಕ ಪ್ರೀತಿ ಪಯಣಕ್ಕೆ ಮುನ್ನುಡಿ ಬರೆಯುವವರು ಹಲವರು. ಚುಂಬನದಿಂದಲೇ ಪ್ರೀತಿಯ ಆಳವನ್ನೂ ತಿಳಿಯಬಹುದು ಎಂದು ಹೇಳಲಾಗುತ್ತದೆ. ಮುತ್ತಿನಲ್ಲಿ ಅದೇನೋ ಮತ್ತು ಇರುವುದು ನಿಜ. ಒಂದೇ ಒಂದು ಮುತ್ತಿಗಾಗಿ ರಾಜ್ಯಗಳನ್ನು ತ್ಯಜಿಸಿದ ರಾಜರು ಇತಿಹಾಸದಲ್ಲಿ ಇದ್ದಾರೆ. ಚುಂಬನದ ಮಹತ್ವ ಅಂಥದ್ದು. ಮುತ್ತಿನಿಂದ ಸಕಾರಾತ್ಮಕ ಪರಿಣಾಮಗಳಷ್ಟೇ ನಕಾರಾತ್ಮಕ ಪರಿಣಾಮಗಳೂ ಇವೆ. ಒಂದು ಮುತ್ತು ಮನದಾಳದ ಪ್ರೀತಿಯನ್ನು ವ್ಯಕ್ತಪಡಿಸುವುದು ಮಾತ್ರವಲ್ಲದೇ, ಜೀವವನ್ನು ತೆಗೆಯುವ ಅಸ್ತ್ರವೂ ಆಗಬಹುದು. ಕೆಲವು ಸಂದರ್ಭಗಳಲ್ಲಿ ಚುಂಬನವು ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಶೀತ ಮತ್ತು ಕೆಮ್ಮಿನಂತಹ ಉಸಿರಾಟದ ವೈರಸ್‌ಗಳು ಸೋಂಕಿತ ವ್ಯಕ್ತಿಯಿಂದ ಮುತ್ತು ಕೊಟ್ಟ ವ್ಯಕ್ತಿಗೆ ಬೇಗನೆ ಹರಡಬಹುದು. ಇದರಿಂದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯ ಕಾಡಬಹುದು. ಮುತ್ತಿನ ವಿವಿಧ...