ಭಾರತ, ಏಪ್ರಿಲ್ 22 -- ಕನ್ನಡದ ಸಾಕಷ್ಟು ಜನಪ್ರಿಯ ನಟ-ನಟಿಯರು ಸಿನಿಮಾಗಾಗಿ ತಮ್ಮ ಮೂಲ ಹೆಸರುಗಳನ್ನು ಬದಲಿಸಿ, ಇನ್ನೊಂದು ಹೆಸರಿನೊಂದಿಗೆ ಜನಪ್ರಿಯತೆ, ಖ್ಯಾತಿ, ಯಶಸ್ಸನ್ನು ಪಡೆದಿದ್ದಾರೆ. ಅಂಥವರ ಪೈಕಿ ಪ್ರಮುಖರಾದವರೆಂದರೆ ಅದು ಡಾ. ರಾಜಕುಮಾರ್‌. ಹಾಗೆ ನೋಡಿದರೆ, ಕುಮಾರತ್ರಯರಲ್ಲಿ ಮೂವರೂ ತಮ್ಮ ಹೆಸರು ಬದಲಿಸಿಕೊಂಡವರೇ. ಡಾ. ರಾಜಕುಮಾರ್‌ ಅವರ ಮೂಲ ಹೆಸರು ಮುತ್ತುರಾಜು ಆದರೆ, ಕಲ್ಯಾಣ್‍ ಕುಮಾರ್‌ ಹೆಸರು ಚೊಕ್ಕಣ್ಣ ಆಗಿತ್ತು. ಉದಯಕುಮಾರ್ ಅವರ ಹೆಸರು ಸೂರ್ಯನಾರಾಯಣ ಶಾಸ್ತ್ರಿ ಎಂದಾಗಿತ್ತು. ಮೂವರೂ ಸಿನಿಮಾಗಾಗಿ ತಮ್ಮ ಹೆಸರು ಬದಲಿಸಿಕೊಂಡಿದ್ದಲ್ಲದೆ, ಸಿನಿಮಾ ಹೆಸರಿನಿಂದಲೇ ಜನಪ್ರಿಯರಾದವರು.

ಮುತ್ತುರಾಜು, ಡಾ. ರಾಜಕುಮಾರ್‌ ಎಂದು ಹೆಸರು ಬದಲಾಯಿಸಿಕೊಂಡಿದ್ದು ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. 1953ರಲ್ಲಿ ಗುಬ್ಬಿ ವೀರಣ್ಣ, ಸಿ.ಆರ್‌. ಬಸವರಾಜ್‍ ಮತ್ತು ಎ.ವಿ. ಮೇಯಪ್ಪ ಚೆಟ್ಟಿಯಾರ್‌ ಪಾಲುದಾರಿಕೆಯಲ್ಲಿ 'ಗುಣಸಾಗರಿ' ಚಿತ್ರವನ್ನು ಮಾಡಿದ್ದರು. ಹೊನ್ನಪ್ಪ ಭಾಗವತರ್ ಮತ್ತು ಪಂಡರಿಬಾಯ...