Bangalore, ಮೇ 22 -- ಶಿವಮೊಗ್ಗದಿಂದ ತೀರ್ಥಹಳ್ಳಿ ಅಲ್ಲಿಂದ ಆಗುಂಬೆ ಮಾರ್ಗವಾಗಿ ಸಂಚರಿಸುವ ಈ ಹಸಿರು ಪಥದ ಪ್ರವಾಸ ಎಂಥವರ ಮೈಮನ ಪುಳಕಿತಗೊಳಿಸುತ್ತದೆ. ಕಾಡಿನ ಮಧ್ಯೆ ಹೋಗುವ ಖುಷಿಯೇ ಬೇರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಕೂಡ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಇಲ್ಲವೇ ಮೈಸೂರಿನಿಂದ ಸುಳ್ಯ ಮಾರ್ಗದಲ್ಲಿ ಬಂದರೆ ಸುಬ್ರಹ್ಮಣ್ಯ ಮಾರ್ಗದ ಯಾನ ಖುಷಿ ನೀಡಲಿದೆ.

ಶಿವಮೊಗ್ಗದಿಂದ ಆಯನೂರು ಅಲ್ಲಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಹೊಸನಗರದ ಕಡೆ ಹೋಗುವ ಯಾನವೂ ನಿಜಕ್ಕೂ ರೋಚಕ ಎನ್ನಿಸಲಿದೆ. ಇದು ಕೂಡ ಅತ್ಯುತ್ತಮ ಕಾಡು ಹಾಗೂ ಹಸುರಿನ ಮಾರ್ಗವೇ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಕಾರವಾರ ಕಡೆಗೆ ಹೋಗುವ ಅಣಶಿ ಅರಣ್ಯದೊಳಗಿನ ಯಾನವಂತೂ ನಿಜಕ್ಕೂ ಮನಮೋಹಕವೇ. ನೂರು ಕಿ.ಮಿ ನಷ್ಟ ದೂರವನ್ನು ಕ್ರಮಿಸುವ ಮಧ್ಯೆ ಸಿಗುವ ಅರಣ್ಯದ ಸೊಬಗು ಸಂತಸ ತರಲಿದೆ.

ಮೈಸೂರಿನಿಂದ ಎಚ್‌ಡಿಕೋಟೆ ಮಾರ್ಗವಾಗಿ ಕೇರಳದ ಮಾನಂದವಾಡಿ ಕಡೆಗೆ ಹೋಗುವ ಮಾರ್ಗ ಕೂಡ ಡ್ರೈವ್‌ಗೆ ಹೇಳಿ ಮಾಡಿ...