ಮೀನು ತಿನ್ನುವ ಸಂಸದ ತೇಜಸ್ವಿ ಸೂರ್ಯ; ತನ್ನದೇ ಪಕ್ಷದ ರಾಜಕಾರಣಿಯನ್ನು ಟೀಕಿಸಿದ ನಟಿ ಕಂಗನಾ ರಣಾವತ್
Bangalore, ಮೇ 6 -- ಬಾಲಿವುಡ್ ನಟಿ- ರಾಜಕಾರಣಿ ಕಂಗನಾ ರಣಾವತ್ ಬಾಯ್ತಪ್ಪಿ ಹೇಳಿದ ಮಾತೊಂದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಸ್ತ್ರವಾಗಿದೆ. ತೇಜಸ್ವಿ ಯಾದವ್ ಬದಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯನ ಹೆಸರು ಹೇಳಿ ಗೊಂದಲ ಮಾಡಿಕೊಂಡಿದ್ದಾರೆ ತೇಜಸ್ ಸಿನಿಮಾ ನಟಿ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ರಣಾವತ್ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ವಿರೋಧ ಪಕ್ಷದ ರಾಜಕಾರಣಿಗಳನ್ನು ಟೀಕಿಸುವ ಭರದಲ್ಲಿ ತಪ್ಪಿ ತನ್ನದೇ ಪಕ್ಷದ ಬೆಂಗಳೂರಿನ ತೇಜಸ್ವಿ ಸೂರ್ಯನ ಹೆಸರು ಹೇಳಿದ್ದಾರೆ.
ಕಂಗನಾ ರಣಾವತ್ ಮಂಡಿಯಲ್ಲಿ ಭಾಷಣ ಮಾಡುತ್ತಿದ್ದರು. ಎದುರಾಳಿ ಪಕ್ಷದ ಸದಸ್ಯರನ್ನು ಟೀಕಿಸುತ್ತಿದ್ದರು. "ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿ ಇರಬಹುದು, ಮೀನು ತಿನ್ನುವ ತೇಜಸ್ವಿ ಸೂರ್ಯ ಇರಬಹುದು" ಎಂದು ಕಂಗನಾ ರಣಾವತ್ ಭಾಷಣ ಮಾಡಿದ್ದಾರೆ. ಇದೀಗ ಈ ಭಾಷಣದ ವಿಡಿಯೋವನ್ನು ತೇಜಸ್ವಿ ಯಾದವ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಾವು ಫಿಶ್ ಫ್ರೈ ತಿನ್ನುತ್ತಿರು...
Click here to read full article from source
To read the full article or to get the complete feed from this publication, please
Contact Us.