Bengaluru, ಮೇ 26 -- ಬೆಂಗಳೂರು: ರಾಜ್ಯದಲ್ಲಿ ಮಾವಿನ ಹಣ್ಣಿನ ಸಗಟು ಧಾರಣೆ ತೀವ್ರ ಕುಸಿತವಾಗಿದ್ದು, ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಹವಾಮಾನ ವೈಪ್ಯರೀತ್ಯದಿಂದ ಈ ಬಾರಿ ಮಾವಿನ ಹಣ್ಣು ಮಾರುಕಟ್ಟೆಗೆ ತಡವಾಗಿ ಬಂದಿತ್ತು. ಅಲ್ಲದೆ, ವಿವಿಧ ತಳಿಗಳ ಮತ್ತು ಜಿಲ್ಲೆಗಳ ಮಾವಿನ ಹಣ್ಣು ಏಕಕಾಲಕ್ಕೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಬೆಲೆ ಇಳಿಕೆಯಾಗಲು ಕಾರಣವಾಗಿದೆ.

ರಾಜ್ಯದ ಮಾರುಕಟ್ಟೆಗೆ ಹೆಚ್ಚಿನ ಮಾವಿನ ಹಣ್ಣನ್ನು ಪೂರೈಸುವ ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕೂಡ ಮಾರುಕಟ್ಟೆಗೆ ಮಾವು ಒಂದೇ ಸಮಯದಲ್ಲಿ ಬಂದಿರುವುದು, ಬೇಡಿಕೆ ಕುಸಿಯಲು ಕಾರಣವಾಗಿದೆ. ಬಾದಾಮಿ ಮಾವಿನ ಹಣ್ಣಿಗೆ ಕೂಡ ಬೇಡಿಕೆ ಇಳಿಮುಖವಾಗಿದೆ. ನೀಲಂ ಮಾವು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿರುವ ಸೇಂದೂರ, ತೂತಾಪುರಿ ಮತ್ತು ಸಿರಿ ತಳಿಯ ಮಾವಿನ ಹಣ್ಣಿಗೆ ಬೇಡಿಕೆ ಇಳಿಮುಖವಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಒಮ್ಮೆಲೆ ವಿವಿಧ ತಳಿಯ ಮಾವಿನ ಹಣ್ಣು ಅವಕವಾಗಿದ್ದು, ರೈತರಿಂದ ಕಡಿಮೆ ಬೆಲೆಗೆ ಸಗಟು ಹಣ್ಣು ಖರೀ...