ಭಾರತ, ಮಾರ್ಚ್ 4 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ನಾನ್ ಸ್ಟ್ರೈಕ್ನಲ್ಲಿದ್ದ ಮಾರ್ನಸ್ ಲಬುಶೇನ್ ಅವರನ್ನು ರನ್ ಓಡದಂತೆ ತಡೆದಿದ್ದು, ಸ್ಟ್ರೈಕ್ನಲ್ಲಿದ್ದ ಸ್ಟೀವ್ ಸ್ಮಿತ್ ಕೋಪಕ್ಕೆ ಕಾರಣವಾಗಿದೆ. ಬ್ಯಾಟರ್ಗೆ ರನ್ ಓಡಲು ಅಡ್ಡಿಪಡಿಸಿದ ಹಿನ್ನೆಲೆ ಜಡೇಜಾ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾ ಇನ್ನಿಂಗ್ಸ್ನ 21ನೇ ಓವರ್ನಲ್ಲಿ ಜಡೇಜಾ ಬೌಲಿಂಗ್ ಮಾಡುತ್ತಿದ್ದರು. ಸ್ಟ್ರೈಕ್ನಲ್ಲಿದ್ದ ಸ್ಟೀವ್ ಸ್ಮಿತ್ ಅವರು ಓವರ್ನ ಎರಡನೇ ಎಸೆತವನ್ನು ಆನ್ಡ್ರೈವ್ ಮಾಡಿದರು. ಆಗ ಜಡ್ಡು ತಮ್ಮ ಬಲಭಾಗಕ್ಕೆ ಓಡಿ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ ಚೆಂಡು ಜಡೇಜಾ ಪಾದಕ್ಕೆ ತಾಗಿ ಶಾರ್ಟ್ ಮಿಡ್ ವಿಕೆಟ್ ಕಡೆಗೆ ಹೋಯಿತು. ಚೆಂಡು ಪ್ರಯತ್ನದಲ್ಲಿ ಜಡ್ಡು, ಲಬುಶೇನ್ರನ್ನು ತಬ್ಬಿ ಹಿಡಿದರು. ಹೀಗಾಗಿ ಸ್ಮಿತ್ ರನ್...
Click here to read full article from source
To read the full article or to get the complete feed from this publication, please
Contact Us.