ಭಾರತ, ಮೇ 14 -- ಆರೋಗ್ಯದ ವಿಚಾರದಲ್ಲಿ ಮತ್ತು ಬಿಡುವಿಲ್ಲದೆ ಕೆಲಸ ನಿರ್ವಹಿಸುವ ಶಕ್ತಿಯನ್ನು ಸ್ತ್ರೀಯರು ಪಡೆದಿರುತ್ತಾರೆ. ಕೆಲವೊಂದು ಧಾರ್ಮಿಕ ಗ್ರಂಥಗಳಲ್ಲಿ ಪ್ರತಿಯೊಬ್ಬ ಸ್ತ್ರೀಯರಲ್ಲಿಯೂ ಶ್ರೀ ದುರ್ಗೆಯ ಅಂಶ ಇರುತ್ತದೆ ಎಂದು ತಿಳಿದುಬರುತ್ತದೆ. ಈ ಕಾರಣದಿಂದಾಗಿ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಪ್ರಾಧಾನ್ಯತೆ ನೀಡಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಇಂತಹ ದೈಹಿಕ ಮತ್ತು ಮಾನಸಿಕ ಶಕ್ತಿ ದೊರೆಯಲು ಕಾರಣ ಅವರ ಹಣೆಯಲ್ಲಿ ಶೋಭಾಯಮಾನವಾದ ಕುಂಕುಮ. ಕೈಯಲ್ಲಿರುವ ಬಳೆಗಳು. ಕುಂಕುಮ ಮತ್ತು ಬಳೆಗಳನ್ನು ಧರಿಸಿದವರ ಬಳಿ ಯಾವುದೇ ದೃಷ್ಟ ಶಕ್ತಿಗಳು ಸಹ ದೂರ ಉಳಿಯುವುದೆಂಬ ನಂಬಿಕೆ ನಮ್ಮಲ್ಲಿದೆ. ಕೆನ್ನೆ ಮತ್ತು ಕೈಗಳಿಗೆ ಅರಿಶಿನವನ್ನು ಹಚ್ಚುತ್ತಾರೆ. ಧಾರ್ಮಿಕತೆಗೆ ಸಂಬಂಧಿಸಿದಂತೆ ಹೆಣ್ಣುಮಕ್ಕಳ ಆರೋಗ್ಯ ಮತ್ತು ಯಶಸ್ಸಿಗೆ ಇದೆ ಕಾರಣವಾಗುತ್ತದೆ. ಇದು ನಂಬಿಕೆಯ ವಿಚಾರವಾಗುತ್ತದೆ.

ಸಾಮಾನ್ಯವಾಗಿ ಪುರುಷರಾಗಲಿ ಸ್ತ್ರೀಯರಾಗಲಿ ಕುಂಕುಮವನ್ನು ಹಣೆಯ ಭಾಗದಲ್ಲಿ ಧರಿಸುತ್ತಾರೆ. ಕುಂಕುಮದಲ್ಲಿ ಆ...