Bengaluru, ಮೇ 26 -- ಮಾತೃಭಾಷೆಯನ್ನೇ ಕಲಿಕಾ ಮಾಧ್ಯಮವಾಗಿ ರೂಪಿಸುವ ಮಹತ್ವದ ಆದೇಶಕ್ಕೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕ್ರಮವೊಂದನ್ನು ತೆಗೆದುಕೊಂಡಿದೆ. ಈ ಮೂಲಕ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕನ್ನು ಸರಿಪಡಿಸಲು ಸಾಮಾನ್ಯ ಜನರಿಗೆ ಒಂದು ಉತ್ತಮ ಅವಕಾಶ ದೊರೆತಂತಾಗಿದೆ. ಕೇಂದ್ರದ ಈ ಕ್ರಮದ ಕುರಿತು ರಾಜೀವ್ ಹೆಗಡೆ ಬರೆದಿರುವ ಲೇಖನ ಇಲ್ಲಿದೆ.

ನೂತನ ಶಿಕ್ಷಣ ನೀತಿಯ ಮೂಲಕ ʼಹಿಂದಿ ಹೇರಿಕೆʼ ಮಾಡುವ ನರೇಂದ್ರ ಮೋದಿ ಸರ್ಕಾರವು ಪ್ರಾದೇಶಿಕ ಭಾಷೆಗಳ ಉಳಿವಿಗೆ ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ. ಶಿಕ್ಷಣದ ಬಗ್ಗೆ ನಾನು ಬರೆಯಲು ಆರಂಭಿಸಿದ ಮೇಲೆ ಬಂದಿರುವಂಥ ಅತ್ಯಂತ ದೊಡ್ಡ ಹಾಗೂ ರಚನಾತ್ಮಕ ಆದೇಶವಿದು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕನ್ನು ಸರಿಪಡಿಸಲು ಸಾಮಾನ್ಯ ಜನರಿಗೆ ಸಿಕ್ಕಿರುವ ದೊಡ್ಡ ಅಸ್ತ್ರ ಇದಾಗಿದೆ. ಆದರೆ ಸಾಮಾನ್ಯ ಜನರು ಹಾಗೂ ಅದರಲ್ಲೂ ಮಧ್ಯಮ, ಬಡ ವರ್ಗದ ಪಾಲಕರು ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತಾರೆ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ.

ಕೇಂದ್ರ ಶಿಕ...