ಭಾರತ, ಮೇ 7 -- ನಾಗರಿಕ ಸ್ವರಕ್ಷಣಾ ತಾಲೀಮು: ಬೆಂಗಳೂರು ವ್ಯಾಪ್ತಿಯಲ್ಲಿ ಮಾಕ್‌ ಡ್ರಿಲ್‌ಗೆ ಸಿದ್ಧತೆ ನಡೆದಿದ್ದು, ವಿದ್ಯುತ್ ದೀಪ ಆರಿಸಿ ಸ್ವರಕ್ಷಣೆ ತಾಲೀಮು ನಡೆಸುವುದಕ್ಕೆ ಸೂಚಿಸಲಾಗಿದೆ. ಇದಲ್ಲದೆ, ವಾಯುದಾಳಿ ನಡೆದಾಗ ಸೈರನ್ ಮೊಳಗಿದಾಗ ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಇಂದು (ಮೇ 7) ನಾಗರಿಕ ಸ್ವರಕ್ಷಣಾ ತಾಲೀಮು ನಡೆಯಲಿದೆ. ವೈಮಾನಿಕ ಧಾಳಿ ನಡೆದಾಗ, ನಾಗರಿಕರು ಹೇಗೆ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಬೆಂಗಳೂರು ನಗರದಲ್ಲಿ ಹಲವು ಕಡೆ ಹಂತ ಹಂತವಾಗಿ 'ಆಪರೇಷನ್‌ ಅಭ್ಯಾಸ್' ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ - ಐಐಎಸ್‌ಸಿ, ಸಿಕ್ಯುಎಎಲ್‌, ಇಎಸ್ಐ ಆಸ್ಪತ್ರೆ, ರಾಜಾಜಿನಗರ, ಎನ್‌ಎಎಲ್‌, ಬೆಂಗಳೂರು ಡೇರಿ, ಕೆನರಾ ಬ್ಯಾಂಕ್‌, ಪುರಭವನ ವೃತ್ತ, ಎಸ್‌ಆರ್‌ಎಸ್, ಪೀಣ್ಯ, ವಿ.ವಿ ಟವರ್‌, ಅಗ್ನಿಶಾಮಕ ಠಾಣೆ, ಜ್ಞಾನಭಾರತಿ, ಅಗ್ನಿಶಾಮಕ ಠಾಣೆ (ನಾಗರಬಾವಿ), ಥಣಿಸಂದ್ರ ಅಗ್ನಿಶಾಮಕ ಠಾಣೆ, ಹ...