Bangalore, ಮೇ 10 -- ಕನ್ನಡ ಸೀರಿಯಲ್‌ಗಳಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ. ಮುಂದೆ ದಿನಕಳೆದಂತ ಆ ಘಟನೆಗಳನ್ನು ಮರೆತಂತೆ ಸೀರಿಯಲ್‌ ಕಥೆಗಳು ಸಾಗುತ್ತವೆ. ಪ್ರೇಕ್ಷಕರಿಗೆ ಪ್ರತಿ ಎಪಿಸೋಡನ್ನು ರಂಜನೀಯವಾಗಿ ನೀಡಬೇಕೆಂದು ಹಲವು ಘಟನೆಗಳನ್ನು ಸೃಷ್ಟಿಸಿ ಮುಂದಿನ ದಿನಗಳಲ್ಲಿ ಆ ಘಟನೆಗಳನ್ನ ಮರೆತು ಮುಂದೆ ಸಾಗಲಾಗುತ್ತದೆ. ಅಮೃತಧಾರೆ ಧಾರಾವಾಹಿಯನ್ನು ಉದಾಹರಣೆಯಾಗಿಟ್ಟುಕೊಂಡು ಸೀರಿಯಲ್‌ಗಳ ಇಂತಹ ಜಾಣ ಮರೆವಿನ ಕುರಿತು ವಿಶ್ಲೇಷಣೆ ಮಾಡೋಣ.

ಈ ಸೀರಿಯಲ್‌ನಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ. ಆ ಘಟನೆ ಮುಗಿದ ಬಳಿಕ ಹಿಂದಿನ ಘಟನೆಗಳ ನೆನಪೇ ಇಲ್ಲದಂತೆ ಮುಂದಿನ ಕಥೆ ಇರುತ್ತದೆ. ಕೆಲವೊಮ್ಮೆ ಇದನ್ನು ಹಲವು ಸಣ್ಣಕಥೆಗಳ ಆಥಾಲಜಿ ಪ್ರಕಾರವೆಂದು ಭಾವಿಸಬೇಕಾಗುತ್ತದೆ. ಉದಾಹರಣೆಗೆ ಜೈದೇವ್‌ನ ವಿಷಯವನ್ನೇ ತೆಗೆದುಕೊಳ್ಳಿ.

ಅಮೃತಧಾರೆ ಸೀರಿಯಲ್‌ ಆರಂಭದಿಂದ ಇಲ್ಲಿಯವರೆಗೆ ಆತ ಎಷ್ಟು ತಪ್ಪು ಮಾಡಿರಬಹುದು. ಆತನ ತಪ್ಪಿನ ಘೋರತೆ ನೋಡಿದ್ರೆ ಜೀವಾವಧಿ ಶಿಕ್ಷೆ ಖಾತ್ರಿ. ಆದರೆ, ಹಳೆಯ ಘಟನೆಗಳನ್ನು, ಆತನ ಹಳೆಯ ತಪ್ಪುಗಳನ್ನು ...