Udupi, ಮೇ 20 -- ಕರ್ನಾಟಕದ ಅತ್ಯಂತ ಸುಂದರ ಬೀಚ್ಗಳಲ್ಲಿ ಒಂದಾದ ಮಲ್ಪೆಯ ಬೀಚ್ಗೆ ಹೊಂದಿಕೊಂಡ ಸೆಂಟ್ ಮೇರೀಸ್ ದ್ವೀಪಕ್ಕೆ ಮುಂದಿನ ನಾಲ್ಕು ತಿಂಗಳು ಭೇಟಿಗೆ ಅವಕಾಶವಿಲ್ಲ.
ಸೆಂಟ್ ಮೇರೀಸ್ ದ್ವೀಪ ಭೇಟಿ, ಸಾಹಸ ಚಟುವಟಕೆ, ಬೋಟಿಂಗ್ ಸಹಿತ ಎಲ್ಲಾ ಚಟುವಟಿಕೆಗಳಿಗೆ ಉಡುಪಿ ಜಿಲ್ಲಾಡಳಿತವು ಸೆಪ್ಟಂಬರ್ 15ರ ವರೆಗೆ ನಿಷೇಧವನ್ನು ಹೇರಿದೆ.
ಈಗಾಗಲೇ ಪೂರ್ವ ಮುಂಗಾರು ಜೋರಾಗಿದೆ. ಇನ್ನೇನು ಮುಂಗಾರು ಮಳೆ ಆರಂಭಕ್ಕೆ ದಿನ ಗಣನೆ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದ್ವೀಪದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಬಂದ್ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿರುತ್ತದೆ. ಇದರಿಂದ ದ್ವೀಪಕ್ಕೆ ತೆರಳುವುದು ಅಪಾಯಕಾರಿಯಾಗಿ ಎನ್ನುವ ವರದಿ ಆಧರಿಸಿ, ಪ್ರತಿ ವರ್ಷ ಮೇ 15ರಿಂದ ಸೆ.15ರವರೆಗೆ ಸೈಂಟ್ ಮೇರಿಸ್ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರುತ್ತದೆ.
ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮೇ 16ರಿಂದ 4 ತಿಂಗಳುಗಳ ಕಾಲ ಸಮುದ್ರದಲ್ಲಿ ಪ್ರವಾಸ...
Click here to read full article from source
To read the full article or to get the complete feed from this publication, please
Contact Us.