ಭಾರತ, ಏಪ್ರಿಲ್ 27 -- ಬೆಂಗಳೂರು: ಮಾವಿನ ಹಣ್ಣಿನ ಸುಗ್ಗಿ ಶುರುವಾಗಿದೆ. ಹಣ್ಣುಗಳ ರಾಜ ಎನಿಸಿಕೊಂಡ ಮಾವು ಮಾರುಕಟ್ಟೆ ದಾಪುಗಾಲಿಟ್ಟಿದ್ದು, ನೀವು ಕೂಡ ಅಂಚೆಯ ಮೂಲಕ ಮನೆ ಬಾಗಿಲಿಗೆ ಮಾವು ತರಿಸಿಕೊಳ್ಳಬಹುದು. ಅದಕ್ಕಾಗಿ ಆನ್ಲೈನ್ನಲ್ಲಿ ಆರ್ಡರ್ ಮಾಡಬೇಕಷ್ಟೆ. ಆದರೆ ಇದೀಗ ಮಾವು ಬೆಳೆಗಾರರಿಗೂ ಗುಡ್ನ್ಯೂಸ್ ಸಿಕ್ಕಿದೆ. ತಾವು ಬೆಳೆದ ಮಾವನ್ನು ಮುಂಬೈ, ದೆಹಲಿಗೂ ಅಂಚೆ ಮೂಲಕವೇ ತಲುಪಿಸಬಹುದು.
ನಗರದ ಜನರಲ್ ಪೋಸ್ಟ್ ಆಫೀಸ್ (GPO) ಈ ಋತುವಿನಲ್ಲಿ ಮುಂಬೈ ಮತ್ತು ದೆಹಲಿಗೆ ಕರ್ನಾಟಕದ ಮಾವಿನ ಹಣ್ಣುಗಳನ್ನು ತಲುಪಿಸಲಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಪ್ರಕಟಿಸಿದ್ದಾರೆ. 2019ರಲ್ಲಿ ಪ್ರಾರಂಭವಾದ ಈ ಉಪಕ್ರಮವು ಇಂಡಿಯಾ ಪೋಸ್ಟ್ನ ಬೆಂಗಳೂರು ಜಿಪಿಒ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ನಡುವಿನ ಸಹಯೋಗವಾಗಿದೆ.
ಇಲ್ಲಿಯವರೆಗೆ, ಇದು ಒಂದು ಲಕ್ಷಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ 3.51 ಲಕ್ಷ ಕೆಜಿ ಮಾವಿನಹಣ್ಣನ್ನು ತಲುಪಿ...
Click here to read full article from source
To read the full article or to get the complete feed from this publication, please
Contact Us.