ಭಾರತ, ಮಾರ್ಚ್ 22 -- ಮಂಗಳೂರು: ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಧುವಾಹಿನಿಯ ತಟದಲ್ಲಿ ಪುನಃ ನಿರ್ಮಾಣಗೊಂಡಿರುವ ಮಧೂರು ಶ್ರೀ ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ - ಮೂಡಪ್ಪಸೇವೆಯ ಸಂಭ್ರಮದಲ್ಲಿದೆ. ಹತ್ತೂರಿನ ಕಡೆಗಳಲ್ಲಿ ಮಧೂರು ಬ್ರಹ್ಮಕಲಶೋತ್ಸವದ ಸಂಭ್ರಮದ ಚರ್ಚೆ ನಡೆಯುತ್ತಿದೆ.
ಮಧೂರು ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಮೂಡಪ್ಪ ಸೇವೆ ಅತ್ಯಂತ ವಿಶೇಷವಾದ ಸೇವೆ. ಹೀಗಾಗಿ ಇಲ್ಲಿ ಮೂಡಪ್ಪ ಸೇವೆಯನ್ನು ಸಲ್ಲಿಸಲೆಂದೇ ಹರಕೆ ಹೊತ್ತು ದೂರದೂರುಗಳಿಂದ ಜನರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೊಸರೂಪ ನೀಡುವ ಬ್ರಹ್ಮಕಲಶೋತ್ಸವ , ಜೀರ್ಣೋದ್ಧಾರ ಕಾರ್ಯಗಳು ಕೆಲ ವರ್ಷಗಳಿಂದ ನಡೆಯುತ್ತಿದ್ದು, ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮಾರ್ಚ್ 27ರಿಂದ ಆರಂಭಗೊಂಡು ಏಪ್ರಿಲ್ 7ರವರೆಗೆ ಮಧೂರು ಬ್ರಹ್ಮಕಲಶೋತ್ಸವ ನಡೆಯಲಿದೆ.
ದಿನನ...
Click here to read full article from source
To read the full article or to get the complete feed from this publication, please
Contact Us.