Madhur,Mangaluru, ಏಪ್ರಿಲ್ 3 -- ಕಾಸರಗೋಡು: ಮಲಯಾಳ ಸಹಿತ ಬಹುಭಾಷಾ ನಟ ಜಯರಾಮ್ ಮಧೂರು ಕ್ಷೇತ್ರಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.
ನಟ ಜಯರಾಮ್ ಅವರು ಗುರುವಾರ ಬೆಳಿಗ್ಗೆ ಮಧೂರು ದೇವಸ್ಥಾನಕ್ಕೆ ಆಗಮಿಸಿದ ವೇಳೆ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಸ್ಥಳೀಯರು ಅವರನ್ನು ಬರಮಾಡಿಕೊಂಡರು.
ಮಾರ್ಚ್ 27ರಿಂದ ಆರಂಭಗೊಂಡು, ಏಪ್ರಿಲ್ 7ರವರೆಗೆ ಕಾಸರಗೋಡು ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರವಾದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿದೆ. ಈಗಾಗಲೇ ಸಹಸ್ರಾರು ಮಂದಿ ಇಲ್ಲಿನ ಕಾರ್ಯಕ್ರಮಗಳಿಗೆ ಆಗಮಿಸಿದ್ದಾರೆ. ಹಲವಾರು ಮಂದಿ ಇಲ್ಲಿಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿದ್ದಾರೆ.
ನಟ ಜಯರಾಮ್ ಅವರ ಆಗಮನ ಸ್ಥಳದಲ್ಲಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಅವರಿಗೆ ಶುಭ ಹಾರೈಸಿದರು. ಅವರ ನಡುವೆ ಸಾಗಿದ ಜಯರಾಂ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವರ ದರ್ಶನ ಪಡೆದರು.
ಶ್ರೀ ಮದನಂತೇಶ್ವರ ದೇವ...
Click here to read full article from source
To read the full article or to get the complete feed from this publication, please
Contact Us.