Bengaluru, ಏಪ್ರಿಲ್ 9 -- ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆ ಕುಂದುಕುಳಂ ಗ್ರಾಮದಲ್ಲಿ ಒಂದೆಡೆ ಎಲ್ಲಿ ನೋಡಿದರೂ ಅಲ್ಲಿ ಗೋಮಾಂಸ ತ್ಯಾಜ್ಯ ಕಣ್ಣಿಗೆ ರಾಚುತ್ತದೆ. ಹಸುವಿನ ಮೃತದ ಎದೆಗೂಡು, ಅಂಗಾಂಗಳು, ಬೀಫ್ ಪ್ರತ್ಯೇಕಿಸಿದ ಬಳಿಕ ಉಳಿದ ತಾಜ್ಯಗಳನ್ನು ಬಟಾ ಬಯಲಲ್ಲಿ ಹಾಕಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತ ದುರ್ನಾತ ಹೆಚ್ಚಾಗಿದ್ದು, ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ಕಾವೇರಿ ವೈಗೈ ಕೃತಿಮಾಲ್ ಗುಂಡಾರ್ ನೀರಾವರಿ ರೈತರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಅರ್ಜುನನ್ ಜಿಲ್ಲಾಡಳಿತದ ಗಮನಸೆಳೆದಿದ್ದು, ತತ್ಕ್ಷಣದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ತಮಿಳು ಪ್ರಕಟಿಸಿರುವ ವಿಶೇಷ ವರದಿಯ ಪ್ರಕಾರ, ಮಧುರೈ ಜಿಲ್ಲೆಯ ತಿರುಮಂಗಲಂ ತಾಲೂಕು ಕುಂದಕುಳಂ ಗ್ರಾಮದಲ್ಲಿ, ಹಸುವಿನ ತಲೆಗಳು, ಮೂಳೆಗಳು, ಚರ್ಮ ಮತ್ತು ಕೊಬ್ಬನ್ನು ಬಯಲಿನಲ್ಲಿ ಒಣಗಿಸಲಾಗುತ್ತದೆ. ಮಧುರೈ, ಥೇನಿ, ದಿಂಡಿಗಲ್, ಶಿವಗಂಗಾ, ರಾಮನಾಥಪುರಂ ಮತ್ತು ವಿರುಧುನಗರ ಜಿಲ್ಲೆಗಳ ಮಾಂಸದ ಅಂಗಡಿಗಳಿಂದ ಗೋಮಾಂ...
Click here to read full article from source
To read the full article or to get the complete feed from this publication, please
Contact Us.