ಭಾರತ, ಮೇ 23 -- ಮದುವೆ ಮನೆ ಎಂದರೆ ಸಂಭ್ರಮ, ಸಡಗರ ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮದುವೆ ಮನೆಗಳಲ್ಲಿ ನಡೆಯುವ ಘಟನೆಗಳು ಹೀಗೂ ಆಗಲು ಸಾಧ್ಯವೇ ಎಂದು ಗಾಬರಿ ಹುಟ್ಟಿಸುತ್ತವೆ. ಇತ್ತೀಚಿಗೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದು ಇಂತಹ ಘಟನೆಗಳು ನಿಜ ಜೀವನದಲ್ಲೂ ನಡೆಯಲು ಸಾಧ್ಯವೇ ಎಂಬ ಭಾವನೆ ಮೂಡುವಂತೆ ಮಾಡಿದೆ.

ಮದುವೆ ಮುಗಿಸಿ ನವ ವಧು ಮನೆಗೆ ತುಂಬಿದಾಗ ಆ ಮನೆಯಲ್ಲಿ ಸಂತೋಷದ ಹೊಳೆ ಹರಿಯುತ್ತದೆ. ಆದರೆ ಈ ಮನೆಯಲ್ಲಿ ಸಂತೋಷದ ಬದಲು ಬಿರುಗಾಳಿ ಎದ್ದಿತ್ತು. ಅದಕ್ಕೆ ಕಾರಣ ಮನೆ ತುಂಬಿದ್ದ ವಧು.

ಮದುವೆಯಾದ ಎರಡನೇ ರಾತ್ರಿ ವಧು ಹೂಡಿದ್ದ ತಂತ್ರ ಮದುವೆಯ ಮನೆಯ ಸಂಭ್ರಮವನ್ನೇ ತಲೆ ಕೆಳಗು ಮಾಡಿತ್ತು. ವಧು ಮಾಡಿದ ಕುತಂತ್ರಕ್ಕೆ ವರ ಮೂರ್ಛೆ ತಪ್ಪಿ ಬಿದಿದ್ದ, ಮಾತ್ರವಲ್ಲ ಮನೆಯವರೆಲ್ಲಾ ದಿಗ್ಭ್ರಮೆಗೆ ಒಳಗಾಗಿದ್ದರು.

ಮದುವೆಯಾದ ಮೂರನೇ ದಿನ ಬೆಳಿಗ್ಗೆ ವಧು-ವರರು ಕೋಣೆ ಬಿಟ್ಟು ಹೊರಗೆ ಬಾರದೇ ಇರುವುದನ್ನು ಕಂಡು ಗಾಬರಿಯಾದ ಮನೆಯವರು ಕೋಣೆ ಪ್ರವೇಶಿಸಿ ನೋಡಿದರೆ ಮೂರ್ಛೆ ಬಿದ್ದ ವರ ಕಾಣ...