Mandya, ಮಾರ್ಚ್ 17 -- Seeking Marriage Blessings: ಕಂಕಣ ಭಾಗ್ಯ ಒದಗಿಸು ದೇವರೇ ಎಂದು ನಿತ್ಯವೂ ದೇವರನ್ನು ಬೇಡುವ ಅನೇಕ ಯುವಜನರು ಮತ್ತು ಅವರ ಪಾಲಕರಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನನ್ನು ನಂಬುವ ಜನ ಸುತ್ತಮುತ್ತಲಿನ ನೂರಾರು ಕಿಮೀ ವ್ಯಾಪ್ತಿಯ ಗ್ರಾಮಗಳ ಕೃಷಿಕರು. ಇತ್ತೀಚಿನ ವರ್ಷಗಳಲ್ಲಿ ಈ ಕೃಷಿಕರು ಎದುರಿಸುವ ಸಮಸ್ಯೆಗಳು ಕೃಷಿಯದಷ್ಟೇ ಅಲ್ಲ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳೂ ಇವೆ. ಬಹುತೇಕ ಅರ್ಹ ಗಂಡು ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಎಂಬುದೇ ಚಿಂತೆ. ಹೀಗಾಗಿ ಈಗ ಮಂಡ್ಯದ ಅವ್ವೇರಹಳ್ಳಿ ಗ್ರಾಮಸ್ಥರು, ಮಳವಳ್ಳಿ ಗ್ರಾಮಸ್ಥರು ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಪಾದಯಾತ್ರೆ ಹರಕೆ ನಡೆಸಿದ್ದಾರೆ.

ಮಂಡ್ಯ ತಾಲೂಕು ಅವ್ವೇರಹಳ್ಳಿಯ ಅವಿವಾಹಿತ ರೈತ ಮಕ್ಕಳು ಕಂಕಣ ಭಾಗ್ಯಕ್ಕಾಗಿ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ಸ್ವಾಮಿಯ ಮೊರೆ ಹೋಗಿದ್ದಾರೆ. ಇದರಂತೆ, ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ 3 ದಿನಗಳ ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆಯನ್ನ ಆಯೋಜನೆ ಮಾಡಿ, ಇಂದು...