ಭಾರತ, ಏಪ್ರಿಲ್ 4 -- Krishna Janmabhoomi Dispute: ಮಥುರಾದ ಶಾಹಿ ಈದ್ಗಾವನ್ನು ಮಸೀದಿಯನ್ನಾಗಿ ಬಳಸಲಾಗುತ್ತಿಲ್ಲ. ಇದು ಭಾರತೀಯ ಪುರಾತತ್ತ್ವ ಇಲಾಖೆಯ ಅಧೀನದಲ್ಲಿರುವ ಸಂರಕ್ಷಿತ ಸ್ಥಳ. ಭಾರತೀಯ ಪುರಾತತ್ತ್ವ ಇಲಾಖೆ ಇದನ್ನು ಮಸೀದಿ ಎಂದು ಮಾನ್ಯ ಮಾಡಿಲ್ಲ ಎಂದು ಹಿಂದೂ ಸಮುದಾಯದವರು ವಾದಿಸಿದ್ದಾರೆ. ಹೀಗಾಗಿ ಮುಸಲ್ಮಾನ ಸಮುದಾಯದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಇದರ ವಿಚಾರಣೆ ನಡೆಯಿತು. ಮುಂದಿನ ವಿಚಾರಣೆ ಏಪ್ರಿಲ್ 8ಕ್ಕೆ ನಿಗದಿಯಾಗಿದೆ. ಇದರೊಂದಿಗೆ ಮಥುರಾದ ಶಾಹಿ ಈದ್ಗಾ ಮತ್ತು ಶ್ರೀಕೃಷ್ಣ ಜನ್ಮಭೂಮಿ ವಿವಾದ ಆಸಕ್ತಿದಾಯ ತಿರುವು ಪಡೆದುಕೊಂಡಿದೆ.

ಮಥುರಾ ಶಾಹಿ ಈದ್ಗಾ ಮಸೀದಿ ಎಂದು ಒಪ್ಪಿಕೊಳ್ಳಲಾಗದು ಭಾರತೀಯ ಪುರಾತತ್ತ್ವ ಇಲಾಖೆ ಹೇಳಿರುವುದರ ಸಿಂಧುತ್ವ ಏನು ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಮಥುರಾ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದದ ಮುಖ್ಯ ಕೇಸ್‌ಗಳಲ್ಲಿ ಎಎಸ್ಐ ಮತ್ತು ಕೇಂದ್ರ ಸರ್ಕಾರವನ್ನು ಸೇರಿಸಿಕೊಳ್ಳಲು ಅನುವು ಮಾಡಿಕೊಡುವ ಅಲಹಾಬಾದ್ ಹೈಕೋರ್ಟ್‌ ತೀರ್...