ಭಾರತ, ಏಪ್ರಿಲ್ 30 -- ಬೆಂಗಳೂರು: ಗ್ರೇಟರ್‌ ಬೆಂಗಳೂರು ಮಸೂದೆಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಹಿ ಹಾಕಿಯಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಐದು ಪಾಲಿಕೆಗಳಾಗಿ ಹೋಳಾಗಲಿದೆ. ಆದರೆ ಪಾಲಿಕೆಗಳಿಗೆ ಚುನಾವಣೆ ತಡವಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆದು 4 ವರ್ಷ 5 ತಿಂಗಳಾಗಿದ್ದು, ಇದೀಗ ಮತ್ತಷ್ಟು ಮುಂದಕ್ಕೆ ಹೋಗಲಿದೆ. 2020 ಸೆಪ್ಟಂಬರ್​​ನಿಂದ ಚುನಾವಣೆ ನಡೆದಿಲ್ಲ. ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಅತ್ತ ನಾಗರಿಕರು ನೀರು, ರಸ್ತೆ, ಚರಂಡಿಯಂತಹ ಸಮಸ್ಯೆಗಳಿಗೂ ವಾರ್ಡ್‌ ಅಧಿಕಾರಿಗಳು ಅಥವಾ ಶಾಸಕರ ಮನೆ ಬಾಗಿಲು ತಟ್ಟಬೇಕಾಗಿದೆ.

ಪಾಲಿಕೆ ಚುನಾವಣೆ ಕುರಿತು ಬೆಂಗಳೂರು ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್​ವರೆಗೆ ದಾವೆಗಳನ್ನು ಹೂಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರ ಪುನರ್‌ವಿಂಗಡನೆಯಿಂದ 198 ವಾರ್ಡ್​​ಗಳಿಂದ 243 ವಾರ್ಡ್​ಗಳಿಗೆ ಹೆಚ್ಚಿಸುವ ಸಲುವಾಗಿ ಸಮಯ ತೆಗೆದುಕೊಂಡಿತ್ತು. ಈಗಿನ ಕಾ...