ಭಾರತ, ಏಪ್ರಿಲ್ 30 -- ಬೆಂಗಳೂರು: ಗ್ರೇಟರ್ ಬೆಂಗಳೂರು ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಹಿ ಹಾಕಿಯಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಐದು ಪಾಲಿಕೆಗಳಾಗಿ ಹೋಳಾಗಲಿದೆ. ಆದರೆ ಪಾಲಿಕೆಗಳಿಗೆ ಚುನಾವಣೆ ತಡವಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆದು 4 ವರ್ಷ 5 ತಿಂಗಳಾಗಿದ್ದು, ಇದೀಗ ಮತ್ತಷ್ಟು ಮುಂದಕ್ಕೆ ಹೋಗಲಿದೆ. 2020 ಸೆಪ್ಟಂಬರ್ನಿಂದ ಚುನಾವಣೆ ನಡೆದಿಲ್ಲ. ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಅತ್ತ ನಾಗರಿಕರು ನೀರು, ರಸ್ತೆ, ಚರಂಡಿಯಂತಹ ಸಮಸ್ಯೆಗಳಿಗೂ ವಾರ್ಡ್ ಅಧಿಕಾರಿಗಳು ಅಥವಾ ಶಾಸಕರ ಮನೆ ಬಾಗಿಲು ತಟ್ಟಬೇಕಾಗಿದೆ.
ಪಾಲಿಕೆ ಚುನಾವಣೆ ಕುರಿತು ಬೆಂಗಳೂರು ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್ವರೆಗೆ ದಾವೆಗಳನ್ನು ಹೂಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರ ಪುನರ್ವಿಂಗಡನೆಯಿಂದ 198 ವಾರ್ಡ್ಗಳಿಂದ 243 ವಾರ್ಡ್ಗಳಿಗೆ ಹೆಚ್ಚಿಸುವ ಸಲುವಾಗಿ ಸಮಯ ತೆಗೆದುಕೊಂಡಿತ್ತು. ಈಗಿನ ಕಾ...
Click here to read full article from source
To read the full article or to get the complete feed from this publication, please
Contact Us.