Mandya, ಮೇ 26 -- ಮಂಡ್ಯದ ಸ್ವರ್ಣಸಂದ್ರ ಸಮೀಪ ಪೊಲೀಸರ ಅಸಡ್ಡೆಯಿಂದ ಸಂಭವಿಸಿದ್ದು ಎನ್ನಲಾದ ಅಪಘಾತದಲ್ಲಿ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಳು. ಬಾಲಕಿಯ ಪಾಲಕರು, ಕುಟುಂಬ ಸದಸ್ಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು. ಪರಿಹಾರದ ವಿಚಾರ ಬಂದಾಗ, ಬಾಲಕಿಯ ತಂದೆ ಬಹಳ ನೋವಿನೊಂದಿಗೆ, ನನ್ನ ಮಗಳು ವಾಪಸ್ ಬರುತ್ತಾಳಾ ಎಂದು ಅಲ್ಲಿದ್ದವರನ್ನು ಕೇಳಿದ್ದಾರೆ.

ಸ್ವರ್ಣಸಂದ್ರ ಹತ್ತಿರ ಮಂಡ್ಯ ಟ್ರಾಫಿಕ್​ ಪೊಲೀಸ್​ ಠಾಣೆಯ ಸಿಬ್ಬಂದಿ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳನ್ನು ಪರಿಶೀಲಿಸಿ, ದಂಡ ವಸೂಲಿ ಮಾಡುತ್ತಿದ್ದರು. ಆಗ, ಮದ್ದೂರು ಭಾಗದಿಂದ ಬಂದ ಬೈಕ್ ಅನ್ನು ತಡೆಗಟ್ಟಿದ್ದರು. ಅವರು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟವರು ಎಂದು ತಿಳಿಸಿದ ಬಳಿಕ ಬಿಟ್ಟುಬಿಟ್ಟಿದ್ದರು ಎಂದು ಎಸ್‌ಪಿ ಮಾಧ್ಯಮಗಳಿಗೆ ತಿಳಿಸಿದರು.

ಘಟನೆ ಬಳಿಕ ಬಾಲಕಿಯ ಶವವನ್ನು ಆಸ್ಪತ್ರೆ ಎದುರು ರಸ್ತೆಯಲ್ಲಿಟ್ಟು ಕುಟುಂಬ ಸದಸ್ಯರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...