Mangaluru, ಜೂನ್ 19 -- ಮಂಗಳೂರು: ಕಂಕನಾಡಿ ಮತ್ತು ಬಜಾಲ್ ಗ್ರಾಮಗಳ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು 43,500 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಂಗಳೂರಿನ ಯು.ಪಿ.ಓ.ಆರ್ (ಅರ್ಬನ್ ಪ್ರಾಪರ್ಟಿ ಓನರ್‌ಶಿಪ್ ರೆಕಾರ್ಡ್) ಕಚೇರಿಯ ಸರ್ವೆಯರ್ ನಂದೀಶ್ ಮತ್ತು ಮಧ್ಯವರ್ತಿ ದಿವಾಕರ್ ಬಿಜೈ ಅವರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಪಿರ್ಯಾದಿದಾರರ ತಾಯಿ ಫೆಬ್ರವರಿ 2025 ರಲ್ಲಿ ತಮ್ಮ ಹೆಸರಿನಲ್ಲಿರುವ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್‌ಗಾಗಿ ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ವಯಸ್ಸಾದ ಕಾರಣ ಪಿರ್ಯಾದಿದಾರರು ಸ್ವತಃ ಕಛೇರಿಗೆ ಭೇಟಿ ನೀಡಿ ಕಡತದ ಪ್ರಗತಿಯ ಬಗ್ಗೆ ವಿಚಾರಿಸಿದ್ದರು. ಏಪ್ರಿಲ್ 2025 ರಲ್ಲಿ ಸರ್ವೆಯರ್ ನಂದೀಶ್ ಸರ್ವೆ ನಡೆಸಿದ ಬಳಿಕ 6,500 ರೂಪಾಯಿ ಲಂಚವನ್ನು ತಾವೇ ಸ್ವೀಕರಿಸಿದ್ದು, ಜೊತೆಗೆ 20,000 ರೂಪಾಯಿ ಲಂಚವನ್ನು ದಿವಾಕರ್ ಬಿಜೈ ಎಂಬ ಮಧ್ಯವರ್ತಿಯ ಮೂಲಕ ಪಡೆದಿದ್ದಾರೆ.

ನಂತರ, ಕಂಕನಾಡಿ ಮತ್ತು...