Mangalore, ಮೇ 17 -- ಮಂಗಳೂರು: ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಕಡಲನಗರಿ ಮಂಗಳೂರು, ಪುತ್ತೂರುಗಳಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರ ಹಾಗೂ ಜೂನ್ ತಿಂಗಳಲ್ಲಿ ಹಲಸು ಹಬ್ಬಗಳನ್ನು ನಾನಾ ಆಯೋಜಕರು ಏರ್ಪಡಿಸುತ್ತಾರೆ. ಹಲಸುಪ್ರಿಯರಿಗೆ ಹಾಗೂ ಸಾವಯವ ತರಕಾರಿ, ಹಣ್ಣು ಖರೀದಿದಾರರಿಗೆ ಇದು ಹಬ್ಬದ ವಾತಾವರಣ ನೀಡುವ ತಾಣವಾಗಿ ಮಾರ್ಪಾಡಾಗುತ್ತದೆ. ಕೃಷಿಕರಿಗೆ ಉತ್ತಮ ಮಾರುಕಟ್ಟೆ ಒದಗಿದರೆ, ನಾನಾ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಕೃಷಿ ಸಂಸ್ಕೃತಿಯತ್ತ ನಗರದಲ್ಲಿರುವವರನ್ನು ಕೊಂಡೊಯ್ಯುವ ಕಾರ್ಯವೂ ಆಗುತ್ತದೆ. ಅಂದ ಹಾಗೆ, ಮೊದಲ ಹಲಸಿನ ಹಬ್ಬ ಮಂಗಳೂರಿನ ಹೃದಯಭಾಗದಲ್ಲೇ ಇರುವ ಬಾಳಂಬಟ್ ಹಾಲ್ ನಲ್ಲಿ ಮೇ 24 ಮತ್ತು 25ರಂದು ನಡೆಯಲಿದೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕರ ಬಳಗ (ರಿ) ಇದನ್ನು ಆಯೋಜಿಸಿದೆ ಎಂದು ಎಂದು ಸಾವಯವ ಕೃಷಿಕ ಗ್ರಾಹಕರ ಬಳಗದ ಕಾರ್ಯದರ್ಶಿ ರತ್ನಾಕರ ಎಚ್‌ಟಿ ಕನ್ನಡ ಪ್ರತಿನಿಧಿಗೆ ತಿಳಿಸಿದ್ದಾರೆ.

ಹಲಸಿನ ಹಬ್ಬ ಎರಡು ದಿನಗಳ ಕಾಲ ನಡೆಯುತ್ತದೆ. ಕರ್ನಾಟಕದ ಬೇರೆ ಬೇರೆ ತಾಲೂಕು...