Bangalore, ಮೇ 1 -- ಅಮೃತಧಾರ ಧಾರಾವಾಹಿ ಕಥೆ (ಏ 30): ರಾಜೇಂದ್ರ ಭೂಪತಿ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಗೌತಮ್‌ ಹೇಳಿದ ಮಾತುಗಳು ಆತನ ತಲೆ ಕೊರೆಯುತ್ತಿವೆ. ಆಗ ಅಲ್ಲಿಗೆ ಜೀವನ್‌ ಆಗಮಿಸುತ್ತಾನೆ. ಬಿಸ್ನೆಸ್‌ ವಿಷಯ ಮಾತನಾಡಬೇಕೆಂದುಕೊಳ್ಳುವಾಗ ಭೂಪತಿ "ಇದೆಲ್ಲ ಇರಲಿ, ಇನ್ಮುಂದೆ ನೀನು ನಮ್ಮ ಮನೆಗೆ ಬರಬೇಡ. ಬರೋದಷ್ಟೇ, ನಮ್ಮ ನಿಮ್ಮ ನಡುವೆ ಯಾವುದೇ ಸಂಬಂಧ ಇಲ್ಲ" ಎಂದು ಭೂಪತಿ ಹೇಳುತ್ತಾನೆ. "ನಿನ್ನ ಮನೆಯವರು ನನ್ನನ್ನು ನೆಮ್ಮದಿಯಾಗಿ ಇರಲು ಬಿಡೋದಿಲ್ಲ. ನಿನ್ನ ಮುಖ ನೋಡಿಕೊಂಡು ಸುಮ್ಮನಿದ್ದೇನೆ. ನಾನು ಯಾಕೆ ತಲೆ ತಗ್ಗಿಸಬೇಕು. ನಾನು ನಿನ್ನ ಬೆನ್ನೆಲುಬು ಆಗಿ ನಿಲ್ಲಬೇಕೆಂದು ನಿಂತೆ ಅಲ್ವಾ? ಅದೇ ನಾನು ಮಾಡಿದ್ದು ತಪ್ಪು" ಎಂದೆಲ್ಲ ಭೂಪತಿ ಹೇಳಿದಾಗ ಜೀವನ್‌ಗೆ ಅಯೋಮಯ. "ಯಾರು ಏನಂದ್ರು?" ಎಂದು ಕೇಳುತ್ತಾನೆ ಜೀವನ್‌. "ನಿನ್ನ ತಲೆಯಲ್ಲಿ ಸೆಗಣಿ ಇಟ್ಟುಕೊಂಡಿದ್ದೀಯಾ. ಅಪ್ಪ ಅಮ್ಮನನ್ನು ಹೊರಗೆ ಹಾಕಿದ್ದೀಯ... ನಿನ್ನ ಭಾವ ನನಗೆ ಹೇಳ್ತಾರೆ. ಎಲ್ಲರೂ ನನ್ನ ಕಡೆಗೆ ನೋಡ್ತಾರೆ. ಇಂದಿಗೆ ನನ್ನ ನಿನ್ನ ಸ್ನೇಹ ಖತಂ...