Bengaluru, ಏಪ್ರಿಲ್ 4 -- ಶಿಕ್ಷಣ ಮುಗಿದ ಬಳಿಕ ಉದ್ಯೋಗ ಸಿಗದೇ ಅಲೆದಾಡುವ ಸ್ಥಿತಿ ಇದೆಯಲ್ಲ, ಅದು ಅನುಭವಿಸಿದವರಿಗೆ ಮಾತ್ರವೇ ಗೊತ್ತಾಗುವಂಥದ್ದು. ಹಾಗಾಗಿ ಇದು ಅಂಥದ್ದೇ ಭಾವನಾತ್ಮಕ ವಿಷಯ. 3 ವರ್ಷ ಉದ್ಯೋಗ ಸಿಗದೇ ಯಾತನೆ ಅನುಭವಿಸಿದ ಬೆಂಗಳೂರು ಯುವಕ ಲಿಂಕ್ಡ್‌ಇನ್‌ನಲ್ಲಿ ತನ್ನದೇ ಶ್ರದ್ಧಾಂಜಲಿ ಪೋಸ್ಟ್ ಹಾಕಿದ. ಅದು ಈಗ ವೈರಲ್ ಆಗಿದೆ. ಅದರಲ್ಲಿ ಆತ ಅನುಭವಿಸಿದ ಯಾತನೆ, ದುಃಖ, ದುಮ್ಮಾನ ಮತ್ತು ಒಂಟಿತನ ಎಲ್ಲವೂ ವ್ಯಕ್ತವಾಗಿದೆ. ಶ್ರದ್ಧಾಂಜಲಿ ಪೋಸ್ಟ್‌ನಲ್ಲಿ ಬಳಸಿದ ಫೋಟೋದಲ್ಲಿ ತನ್ನ ಭಾವಚಿತ್ರವನ್ನು ಅಂಡಾಕಾರದ ಫ್ರೇಮ್‌ನಲ್ಲಿ ಇಟ್ಟಿದ್ದಾರೆ. ರೆಸ್ಟ್ ಇನ್ ಪೀಸ್ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಪ್ರಶಾಂತ್‌ ಹರಿದಾಸ್‌. 1 ಏಪ್ರಿಲ್ 1993 ರಿಂದ 01 ಏಪ್ರಿಲ್ 2025. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟವರು. ನೋವಿನಿಂದಲೇ ಪ್ರೀತಿಸಲ್ಪಟ್ಟವನು ಮತ್ತು ನೊಂದುಕೊಳ್ಳುತ್ತಿರುವವನು ಎಂದು ಬರೆದುಕೊಂಡಿರುವ ಕಾರಣ ಇದು ಗಮನಸೆಳೆದಿದೆ.

ಲಿಂಕ್ಡ್‌ಇನ್‌ ತಾಣದಲ್ಲಿ ತನ್ನದೇ ಶ್ರದ್ಧಾಂಜಲಿ ಪೋಸ್ಟ್ ಹಾಕಿದ ಬೆಂಗಳೂರು ಯುವಕ ...