ಭಾರತ, ಮೇ 13 -- ಇತ್ತೀಚೆಗೆ ಆರಂಭವಾದ ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯು ಕಿರುತೆರೆ ಸೀರಿಯಲ್‌ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಭಾರ್ಗವಿಯಾಗಿ ರಾಧಾ ಭಗವತಿ ನಟನೆಗೆ ಪ್ರೇಕ್ಷಕರು ವಾಹ್‌ ಎನ್ನುತ್ತಿದ್ದಾರೆ. ಇದೀಗ ಧಾರಾವಾಹಿಯಲ್ಲೊಂದು ಘಟನೆ ನಡೆದಿದೆ.

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾರ್ಗವಿ LL.Bಯಲ್ಲಿ ಭಾರ್ಗವಿಯ ಪ್ರಾಣ ತೆಗೆಯಲು ಕೇಡಿಗಳು ನಿರ್ಧರಿಸಿದ್ದಾರೆ. ಅಲ್ಲಿ ಭಾರ್ಗವಿ ಗೆ ಅಪಾಯವಾಗಿದೆ, ಕೇಡಿಗಳು ಅವಳ ಪ್ರಾಣಕ್ಕೇ ಕುತ್ತು ತರುವ ಹಂತದಲ್ಲಿದ್ದಾರೆ.

ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರೋ ಭಾರ್ಗವಿ, ಅವಳನ್ನ ಕಾಪಾಡಲಿಕ್ಕೆ ಬಂದಿರೋದು - ಸ್ಪೆಷಲ್ ಗೆಸ್ಟ್! ಹೌದು ಈ ಸೀರಿಯಲ್‌ನಲ್ಲಿ ಭಾರ್ಗವಿಯನ್ನು ಕಾಪಾಡಲು ವಿಶೇಷ ಅತಿಥಿ ಆಗಮಿಸಿದ್ದಾರೆ.

ಯಾರು ಆ ವಿಶೇಷ ಅತಿಥಿ - ಬಿಗ್ ಬಾಸ್ ಸೀಸನ್ ೧೨ ರಲ್ಲಿ ಅತ್ಯಂತ ಜನಪ್ರಿಯವಾದ ತಾರೆ. ಊಹಿಸಬಲ್ಲಿರಾ? ಅವರೇ ಗೌತಮಿ ಜಾಧವ್.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಭಾರ್ಗವಿ LL.B'ಯ ಪ್ರೋಮೋದಲ್...