Bengaluru, ಏಪ್ರಿಲ್ 25 -- ಸೀತಾ ರಾಮ ಸೀರಿಯಲ್‌ನಲ್ಲಿ ಟ್ವಿಸ್ಟ್‌ಗಳನ್ನು ನೋಡುತ್ತಿದ್ದರೆ, ಈ ಸೀರಿಯಲ್‌ ಇನ್ನೆನು ಹೆಚ್ಚು ದಿನ ಪ್ರಸಾರ ಕಾಣಿಸಲ್ಲ. ಏಕೆಂದರೆ, ಬಚ್ಚಿಟ್ಟ ಸತ್ಯಗಳೀಗ ಒಂದೊಂದಾಗಿಯೇ ಹೊರಬರುತ್ತಿವೆ.

ಸಿಹಿ ಸಾವಿಗೆ ಭಾರ್ಗವಿಯೇ ಕಾರಣ ಎಂಬ ಸತ್ಯ ಇನ್ನೇನು ಎಲ್ಲರಿಗೂ ತಿಳಿಯುವ ಸಮಯ ಹತ್ತಿರ ಬಂದಿದೆ. ಸಿಹಿ ಬರೆದ ಪತ್ರವನ್ನು ಇನ್ನೇನು ರಾಮ್‌ ಓದಬೇಕು ಎನ್ನುವಷ್ಟರಲ್ಲಿ ಭಾರ್ಗವಿ ಅಡ್ಡಗಾಲು ಹಾಕಿದ್ದಳು.

ಆ ಪತ್ರ ರಾಮ್‌ ಓದುವ ಬದಲು ಭಾರ್ಗವಿ ಕೈ ಸೇರಿತ್ತು. ಇನ್ನೇನು ಆಕೆ ಓದಬೇಕು ಎನ್ನುವಷ್ಟರಲ್ಲಿಯೇ ಅಶೋಕ ಆಗಮಿಸಿ, ಕೈಯಲ್ಲಿನ ಪತ್ರವನ್ನು ಕಸಿದುಕೊಂಡಿದ್ದಾನೆ. ಸುಳ್ಳನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ ಅನ್ನೋ ಅಶೋಕನ ಮಾತು ಭಾರ್ಗವಿಗೆ ನಡುಕ ಹುಟ್ಟಿಸಿದೆ.

ಸಿಹಿ ಕೈ ಬರಹ ಈಗ ಎಲ್ಲಿಂದ ಬರಲು ಸಾಧ್ಯ. ಸಾಯುವುದಕ್ಕೂ ಮುಂಚೆನೇ ಬರೆದಿಟ್ಟು ಸತ್ತಳಾ? ಎಂದು ಗೊಂದಲ ಆತಂಕದಲ್ಲಿದ್ದಾಳೆ ಭಾರ್ಗವಿ. ತನ್ನ ಆತಂಕವನ್ನು ದೂರ ಮಾಡಿಕೊಳ್ಳಲು ಸಿಹಿ ರೂಪದ ಸುಬ್ಬಿ ಬಳಿ ಬಂದು ಪರೀಕ್ಷೆಗೆ ಮುಂದಾಗಿದ್ದ...