Bengaluru, ಏಪ್ರಿಲ್ 30 -- ಭಾರ್ಗವಿಯ ಮತ್ತೊಂದು ಮುಖ ಕಳಚಲು ಅಶೋಕ ಪ್ಲಾನ್‌ ಮಾಡಿದ್ದಾನೆ. ರಾಮ್‌ನ ಮನೆಯಲ್ಲಿ ಮಕ್ಕಳೊಟ್ಟಿಗೆ ಸೇರಿ ಡ್ರಾಮಾ ಪ್ರಾಕ್ಟಿಸ್‌ ಮಾಡಿಸುತ್ತಿದ್ದಾನೆ.

ಅಷ್ಟಕ್ಕೂ ಅಶೋಕ ಸೃಷ್ಟಿಸುತ್ತಿರುವ ನಾಟಕ ಭಾರ್ಗವಿಯದ್ದೆ. ಆಕೆ ಮಾಡಿದ ಕರ್ಮಗಳನ್ನು ಆಕೆ ಮುಂದೆಯೇ ಮಕ್ಕಳ ಮೂಲಕ ತೆರೆದಿಡುವ ಕೆಲಸಕ್ಕೆ ಮುಂದಾಗಿದ್ದಾನೆ.

ಸೀತಾ ರಾಮರ ಪ್ರೀತಿ, ಸೀತಾ ರಾಮ ಕಲ್ಯಾಣದಿಂದ ಆರಂಭವಾಗಿ, ಕೊನೆಗೆ ಅದು ಸಿಹಿಯ ಕೊಲೆಯ ಮೂಲಕ ಅಂತ್ಯವಾಗುತ್ತದೆ. ಹೀಗೆ ಸಾಗುವ ಮಕ್ಕಳ ನಾಟಕದಲ್ಲಿ, ಸಿಹಿ ಹತ್ಯೆಯ ಹಿಂದಿನ ಅಸಲಿಯತ್ತಿನ ಸ್ಕ್ರಿಪ್ಟ್‌ ಬರೆದಿದ್ದಾನೆ ಅಶೋಕ.

ಈ ನಾಟಕದ ಕಥೆ ಏನು ಎಂಬುದು ಭಾರ್ಗವಿ ಮತ್ತು ವಿಶ್ವನಿಗೂ ಗೊತ್ತಾಗಿದೆ. ಒಳಗೊಳಗೆ ಅವರಿಬ್ಬರು ಅಶೋಕ ಆಟ ಕಂಡು ಕುದಿಯುತ್ತಿದ್ದಾರೆ. ಪ್ಲಾನ್‌ ಮೇಲೆ ಪ್ಲಾನ್‌ ಹಾಕುತ್ತಿದ್ದಾರೆ.

ಅಷ್ಟೇ ಅಲ್ಲ ಆ ಮಕ್ಕಳ ನಾಟಕವನ್ನು ಸ್ವತಃ ಭಾರ್ಗವಿ ಕೈಯಿಂದಲೇ ಉದ್ಘಾಟನೆ ಮಾಡಿಸುವ ಲೆಕ್ಕಾಚಾರವೂ ಅಶೋಕನದ್ದು. ಈ ವಿಚಾರವನ್ನೂ ಈಗಾಗಲೇ ಭಾರ್ಗವಿಗೆ ಹೇಳಿದ್ದಾನೆ.

ಇತ್ತ ಇದೇ...