ಭಾರತ, ಮೇ 13 -- ಬೆಂಗಳೂರು: ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತಲೆದೋರಿರುತ್ತದೆ. ಆಪರೇಷನ್ ಸಿಂದೂರ್ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಎದಿರೇಟನ್ನೂ ನೀಡಿದೆ. ಸಧ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದಗಿದ್ದರೂ ಪಾಕ್ ನಂಬಲರ್ಹ ದೇಶವಲ್ಲ. ಹಾಗಾಗಿ ಭಾರತ ಸಶಸ್ತ್ರ ಪಡೆಗಳನ್ನು ಸದಾ ಸನ್ನದ್ದವಾಗಿಟ್ಟಿರಲು ಭಾರತ ಬಯಸಿದೆ.
ಭಾರತೀಯ ಪ್ರಾದೇಶಿಕ ಸೇನೆ (ಟಿಎ ) ಭಾರತೀಯ ಸೇನೆಯ ನಂತರ ಎರಡನೇ ಸಾಲಿನ ರಕ್ಷಣಾ ಪಡೆ ಎಂದು ಸರಳವಾಗಿ ಹೇಳಬಹುದು. ಇದು ವೃತ್ತಿ, ಉದ್ಯೋಗ ಅಥವಾ ಉದ್ಯೋಗದ ಮೂಲವಲ್ಲ. ಈಗಾಗಲೇ ಯಾವುದೇ ನಾಗರಿಕ ವೃತ್ತಿಗಳಲ್ಲಿರುವವರಿಗೆ ಮಾತ್ರ ಅನ್ವಯವಾಗುತ್ತದೆ. ಪ್ರಾದೇಶಿಕ ಸೇನೆಯ ಸ್ವಯಂಸೇವಕರು ಪ್ರತಿ ವರ್ಷವೂ ಕೆಲವು ದಿನಗಳ ಅವಧಿಗೆ ಸಮವಸ್ತ್ರದಲ್ಲಿ ಸೇವೆ ಸಲ್ಲಿಸುತ್ತಾರೆ. ಆಂತರಿಕ ಭದ್ರತಾ ಕರ್ತವ್ಯ ಅಥವಾ ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಇವರನ್ನು ಬಳಸಿಕೊಳ್ಳಲಾಗುತ್ತದೆ. ರಾಷ್ಟ್ರೀಯ ರಕ್ಷಣೆಗ...
Click here to read full article from source
To read the full article or to get the complete feed from this publication, please
Contact Us.