ಭಾರತ, ಏಪ್ರಿಲ್ 1 -- Muhammad Yunus: ನೆರೆಹೊರೆ ದೇಶಗಳ ಪೈಕಿ ಅತಿದೊಡ್ಡ ದೇಶವಾಗಿರುವ ಚೀನಾ ಈ ಭೌಗೋಳಿಕ ಪ್ರದೇಶದಲ್ಲಿ ತನ್ನದೇ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಭಾರತಕ್ಕೆ ಇದರ ಸ್ಪಷ್ಟ ಅರಿವು ಇದ್ದು, ಚೀನಾ ಪ್ರಭಾವದಿಂದ ತನ್ನನ್ನು ರಕ್ಷಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಲೇ ಬಂದಿದೆ. ಚೀನಾಕ್ಕೂ ಭಾರತದ ಬಗ್ಗೆ ಭೀತಿ ಇದೆ. ಹೀಗಾಗಿ ಭಾರತದ ಸುತ್ತ ಆಯಕಟ್ಟಿನ ದೇಶಗಳಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸಲು ಅದು ಪ್ರಯತ್ನಿಸುತ್ತಲೇ ಇದೆ. ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ಎಂದರೆ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಪತನವಾದ ಬಳಿಕ ಸೇನಾಡಳಿತ ಜಾರಿಯಲ್ಲಿದೆ. ಸೇನಾಡಳಿತದ ಕೈಗೊಂಬೆಯಾಗಿರುವ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ನೀಡಿರುವ ಹೇಳಿಕೆ ಭಾರತ ವಿಭಜನೆಗೆ ಚೀನಾಕ್ಕೆ ಕುಮ್ಮಕ್ಕು ನೀಡಿದಂತೆ ಭಾಸವಾಗಿದೆ.
ಭಾರತದ ಸೆವೆನ್ ಸಿಸ್ಟರ್ಸ್ ಎಂದು ಪರಿಗಣಿಸಲ್ಪಟ್ಟಿರುವ ಈಶಾನ್ಯ ರಾಜ್ಯಗಳು ಚಿಕನ್ನೆಕ್ ಪ್ರದೇಶದ ಮೂಲಕ ಭಾರತದ ಜತೆಗೆ ಸೇರಿಕೊಂಡಿವೆ. ಅದು ಬಿಟ್ಟರೆ ಅದು ಬಾಂಗ್ಲಾದೇಶದ ಕಾರಣ ಲಾಕ್ ಆಗ...
Click here to read full article from source
To read the full article or to get the complete feed from this publication, please
Contact Us.