ಭಾರತ, ಮೇ 12 -- ಇಂಡೋ-ಪಾಕ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿ ಭಾರತದ ಸೇನೆ ಕುರಿತು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿ ನಡೆಸಿ ತಮ್ಮ ಸೇನಾ ಕಾರ್ಯಾಚರಣೆ ಹೇಗಿತ್ತು ಎನ್ನುವುದರ ಕುರಿತು ವಿವರಣೆ ನೀಡಿದ್ದಾರೆ. ಭಾರತದ ಸೇನೆಯ ಹೋರಾಟಕ್ಕೆ ಸಂಬಂಧಿಸಿ ಉತ್ತಮ ಉದಾಹರಣೆ ಕೊಟ್ಟಿದ್ದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆ್ಯಶಸ್ ಸರಣಿಯ ಕುರಿತು! ಪತ್ರಿಕಾಗೋಷ್ಠಿ ಆರಂಭಿಸಿದ್ದು ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ. ನಾನಿಂದು ಕ್ರಿಕೆಟ್​ ಬಗ್ಗೆ ಮಾತನಾಡಬೇಕು. ವಿರಾಟ್ ಟೆಸ್ಟ್​​​ನಿಂದ ನಿವೃತ್ತರಾಗಿದ್ದಾರೆ. ನನಗೆ ಅವರು ನೆಚ್ಚಿನ ಕ್ರಿಕೆಟಿಗನೂ ಹೌದು ಎಂದಿದ್ದಾರೆ.

ವಾಯು ರಕ್ಷಣಾ ವ್ಯವಸ್ಥೆಯ ಶಕ್ತಿ ಮತ್ತು ನಿಖರತೆ ವಿವರಿಸುವಾಗ, ಘಾಯ್ ಅದನ್ನು ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಜೆಫ್ ಥಾಮ್ಸನ್ ಮತ್ತು ಡೆನ್ನಿಸ್ ಲಿಲ್ಲೀ ಮಾರಕ ಜೋಡಿಗೆ ಹೋಲಿಸಿದ್ದಾರೆ. ಇದೇ ವೇಳೆ ಈ ಇಬ್ಬರು ಬೌಲರ್​​ಗಳು ನಡೆಸಿದ ಮಾರಕ ದಾಳಿಯ ಘಟನೆಯೊಂದನ...