ಭಾರತ, ಮೇ 11 -- ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಸರ್ಕಾರ ಭಯೋತ್ಪಾದನೆ ವಿರುದ್ಧದ ತನ್ನ ಸಮರ ತೀವ್ರಗೊಳಿಸಿದೆ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ನೆಲದ ಮೇಲಿರುವ ಉಗ್ರ ಶಿಬಿರ, ಉಗ್ರ ಸಂಘಟನೆಗಳ ಮೂಲಸೌಕರ್ಯಗಳನ್ನು ಭಾರತೀಯ ಸೇನೆ ನಾಶಪಡಿಸುವ ಕೆಲಸ ಮಾಡುತ್ತಿದೆ. ಈ ನಡುವೆ, ಸಾಮಾಜಿಕ ತಾಣಗಳಲ್ಲಿ ಊಹಾಪೋಹದ ಬರಹಗಳು, ಸುದ್ದಿಗಳ ಹರಡುವಿಕೆ ಕಡಿಮೆ ಏನಲ್ಲ. ಈ ಸನ್ನಿವೇಶದ ನಡುವೆ ನಮಗೆ ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ಎಂಬುದು ಗೊತ್ತಿರಬೇಕು. ಅದೇ ರೀತಿ ದೇಶದ ಒಳಗೆ ಮತ್ತು ಹೊರಗೆ ಭಾರತೀಯ ಸಂಸ್ಕೃತಿಯ ಏಕಸೂತ್ರಕ್ಕೆ ಇರುವ ನಿಜವಾದ ಥ್ರೆಟ್ ಏನು ಎಂಬುದೂ ತಿಳಿದಿರಬೇಕು ಎನ್ನುತ್ತ 12 ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ ಲೇಖಕ ಅಜಕ್ಕಳ ಗಿರೀಶ್ ಭಟ್.

ಕದನ ವಿರಾಮ ನಿಲ್ಲುತ್ತದೋ ಇಲ್ಲವೋ ಗೊತ್ತಿಲ್ಲ.. ದೇಶವು ಯುದ್ಧದಲ್ಲಿರುವ ಹೊತ್ತಲ್ಲಿ ಪ್ರಜೆಗಳೂ ಯುದ್ಧೋತ್ಸಾಹದಲ್ಲಿ ಮಾತನಾಡುವುದು, ಬರೆಯುವುದು ಸಹಜವೇ ಹೌದು. ನಮ್ಮ ದೇಶದ ಸೈನ್ಯಶಕ್ತಿ ಪಾಕಿಗಿಂತ ಉತ್ತಮವಿರುವುದರಿಂದ, ಪಿಒಕೆ ವಶಪಡಿಸಿಕೊ...