Delhi, ಮೇ 3 -- ದೆಹಲಿ: ಈ ಬೇಸಿಗೆಯಲ್ಲಿ ಭಾರತದ ಪ್ರಮುಖ ಯಾತ್ರಾ ಸ್ಥಳಗಳನ್ನು ಒಂದೇ ಪ್ರವಾಸದಲ್ಲಿ ನೋಡುವ ಆಸಕ್ತಿ ಇದೆಯಾ, ಉತ್ತರ ಹಾಗೂ ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮನಸಿದ್ದರೆ ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಐಆರ್‌ಸಿಟಿಸಿಯು 17 ದಿನಗಳ ಕಾಲದ ಭಾರತ್‌ ಗೌರವ್‌ ಯಾತ್ರೆಯನ್ನು ಇದೇ ತಿಂಗಳಲ್ಲಿ ರೂಪಿಸಿದೆ. ಈ ಹಿಂದೆಯೂ ಇದೇ ಮಾದರಿಯ ಭಾರತ್‌ ದರ್ಶನ ಯಾತ್ರೆಗಳನ್ನು ರೂಪಿಸಿರುವ ಭಾರತೀಯ ರೈಲ್ವೆಯ ಪ್ರವಾಸೋದ್ಯಮ ಮತ್ತು ಆಹಾರ ನಿಗಮ( IRCTC) ಮತ್ತೆ ಅದೇ ಮಾದರಿಯ ಪ್ರವಾಸವನ್ನು ಮೇ ಹಾಗೂ ಜೂನ್‌ ತಿಂಗಳಲ್ಲಿ ರೂಪಿಸಿದೆ.

ಸಾವಿರಾರು ಜನರ ಆಧ್ಯಾತ್ಮಿಕ ಆಕಾಂಕ್ಷೆಗಳನ್ನು ಪೂರೈಸುವ ಮೂಲಕ, ಭಾರತೀಯ ರೈಲ್ವೆ ಬದರಿನಾಥ, ಜಗನ್ನಾಥ ಪುರಿ, ರಾಮೇಶ್ವರಂ ಮತ್ತು ದ್ವಾರಕಾಧೀಶಗಳನ್ನು ಒಳಗೊಂಡ ಐಕಾನಿಕ್ ಚಾರ್ ಧಾಮ್ ಯಾತ್ರಾ ಸರ್ಕ್ಯೂಟ್‌ನಲ್ಲಿ ಭಾರತ್ ಗೌರವ್ ಡಿಲಕ್ಸ್ ಎಸಿ ಪ್ರವಾಸಿ ರೈಲನ್ನು ಪುನಃ ಹಳಿಗೆ ಇಳಿಸಲು ಸಜ್ಜಾಗಿದೆ. ಮೇ ಮೊದಲ ವಾರದಲ್ಲಿ ಬದರಿನಾಥ ಧಾಮ್ ಪ್ರಾರಂಭವಾದ ನಂತರ ಅಂದರೆ 2...