ಭಾರತ, ಮೇ 22 -- ಕಾರವಾರ: ಭಾರತದಲ್ಲಿ 5ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಪ್ರಾಚೀನ ಮಾದರಿಯ ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ನೌಕೆಗೆ ಮರುಜೀವ ನೀಡಿ, 'ಐಎನ್ಎಸ್‌ವಿ ಕೌಂಡಿನ್ಯ' ಎಂಬ ಹೆಸರಿನೊಂದಿಗೆ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಬುಧವಾರ (ಮೇ 21) ಈ ಪ್ರಾಚೀನ ಕಾಲದ ಮಾದರಿಯ ಹಡಗು ನೌಕಾಪಡೆ ಸೇರ್ಪಡೆಯಾಯಿತು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ನೌಕೆ ಲೋಕಾರ್ಪಣೆಗೊಳಿಸಿದರು.

ಐಎನ್‌ಎಸ್‌ವಿ ಕೌಂಡಿನ್ಯ ಹಡಗು ಸದ್ಯ ಕಾರಾವಾರದ ಕದಂಬ ನೌಕಾ ನೆಲೆಯಲ್ಲಿ ಇರಲಿದೆ. ಕೆಲ ದಿನಗಳ ಬಳಿಕ ಒಮಾನ್ ದೇಶಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ನೌಕಾಪಡೆಗೆ ಐಎನ್ಎಸ್‌ವಿ ಕೌಂಡಿನ್ಯ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವೈಸ್ ಅಡ್ಮಿರಲ್ ರಾಜಾರಾಮ್ ಸ್ವಾಮಿನಾಥನ್, ನೌಕಾದಳದ ನಿವೃತ್ತ ಮುಖ್ಯಸ್ಥ ಕರಣವೀರ ಸಿಂಗ್, ಕರ್ನಾಟಕ ನೌಕಾ ಪ್ರದೇಶದ ಧ್ವಜಾಧಿಕಾರಿ ರಿಯರ್ ಅಡ್...