ಭಾರತ, ಮೇ 8 -- ಭಾರತದ ರಕ್ಷಣಾ ವ್ಯವಸ್ಥೆ ಎಷ್ಟು ಬಲಿಷ್ಠವಾಗಿದೆ ಎಂಬುದು ಮತ್ತೊಮ್ಮೆ ವಿಶ್ವಕ್ಕೆ ಸಾಬೀತಾಗಿದೆ. ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನದ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿ ಭಾರತ ನಡೆಸಿರುವ ಕ್ಷಿಪಣಿ ದಾಳಿಗೆ ಪಾಕ್‌ ಮಾತ್ರವಲ್ಲದೆ ಜಗತ್ತೇ ಬೆಚ್ಚಿದೆ. ಭಾರತದ ತಂಟೆಗೆ ಬಂದರೆ ಯಾರನ್ನೂ ಸುಮ್ಮನೆ ಬಿಡುವ ಮಾತೇ ಇಲ್ಲ ಎನ್ನುವುದನ್ನು ಮತ್ತೊಮ್ಮೆ ದೇಶ ಸಾಬೀತುಪಡಿಸಿದೆ. ಈ ನಿಖರ ದಾಳಿಗೆ ಭಾರತದ ಪ್ರಬಲ ರಕ್ಷಣಾ ವ್ಯವಸ್ಥೆಯನ್ನು ಮುಕ್ತಕಂಠದಿಂದ ಶ್ಲಾಘಿಸಬೇಕು. ಭಾರತದ ವಾಯು ರಕ್ಷಣಾ ವ್ಯವಸ್ಥೆ ಹೇಗಿದೆ? ಭಾರತದ ರಕ್ಷಣಾ ವ್ಯವಸ್ಥೆ ಬಗ್ಗೆ ನೆರೆಯ ರಾಷ್ಟ್ರಗಳಿಗೆ ಏಕೆ ಇಷ್ಟೊಂದು ಭಯ ಎಂಬುದನ್ನು ವಿಂಗ್ ಕಮಾಂಡರ್ ‌ಸುದರ್ಶನ ಅವರು ಸುದೀರ್ಘ ಲೇಖನದ ಮೂಲಕ ವಿವರಿಸಿದ್ದಾರೆ. ಇಲ್ಲಿರುವ ಬರಹ ‌ಸುದರ್ಶನ ಅವರದ್ದು.

ವಾಯು ರಕ್ಷಣಾ ವ್ಯವಸ್ಥೆಯ ಹೃದಯ ಭಾಗದಲ್ಲಿರುವುದೇ ಶಕ್ತಿಯುತವಾದ ರಡಾರುಗಳು. ಭಾರತದಲ್ಲೇ ತಯಾರಾದ, ಸುಮಾರು 2000 ಕಿಮೀ ದೂರದವರೆಗೂ ಆಕಾಶವನ್ನು ವೀಕ್ಷಿಸು...